newsics.com
ಬಿಗ್ಬಾಸ್ ಕನ್ನಡ ಸೀಸನ್ 11ನ್ನು ಹಾಳು ಮಾಡುವುದಾಗಿ ಬಹಿರಂಗವಾಗಿ ಹೇಳಿದ್ದ ಸ್ವಯಂಘೋಷಿತ ವಕೀಲ ಜಗದೀಶ್ ಅವರನ್ಜು ಕಿಚ್ಚ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮ ಈ ಹೇಳಿಕೆ ಜೋಕ್ನಂತಿತ್ತು. ನಿಮ್ಮಪ್ಪನಾಣೆಯಾಗಿಯೂ ಬಿಗ್ಬಾಸ್ ಅನ್ನು ಹಾಳುಮಾಡಲಾರಿರಿ ಎಂದು ಸುದೀಪ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
ಸೀಸನ್ ಆರಂಭವಾದಾಗಿನಿಂದಲೂ ಮನೆಯ ಒಳಗೆ ಜಗಳಗಳೇ ನಡೆಯುತ್ತಿವೆ. ಬಿಗ್ಬಾಸ್ ಆರಂಭವಾದ ಕೆಲವೇ ದಿನಗಳಲ್ಲಿ ಲಾಯರ್ ಜಗದೀಶ್ ಬಿಗ್ಬಾಸ್ ಮೇಲೆ ಆವಾಜ್ ಹಾಕಿದ್ದರು. ‘ಬಿಗ್ ಬಾಸ್ ಅನ್ನು ಎಕ್ಸ್ಪೋಸ್ ಮಾಡ್ತೀನಿ’, ‘ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ಹೇಗೆ ನಡೆಸ್ತೀರ ನೋಡ್ತೀನಿ’ ಎಂದೆಲ್ಲ ಆವಾಜ್ ಹಾಕಿದ್ದರು. ಇದು ಭಾರೀ ಸುದ್ದಿಯಾಗಿತ್ತು.
ಶನಿವಾರ ಈ ಸೀಸನ್ನ ಮೊದಲ ವಾರದ ಪಂಚಾಯ್ತಿ ನಡೆದಿದ್ದು, ಸುದೀಪ್, ಲಾಯರ್ ಜಗದೀಶ್ಗೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
ಬಿಗ್ಬಾಸ್ ಅನ್ನು ಎಕ್ಸ್ಪೋಸ್ ಮಾಡುವುದಾಗಿ, ಬಿಗ್ಬಾಸ್ನ ಬಾಗಿಲು ಒಡೆಸುವುದಾಗಿ ಹೇಳಿದ್ದ ವಕೀಲ ಜಗದೀಶ್ಗೆ ಕಿಚ್ಚ ಸುದೀಪ್ ಸರಿಯಾಗಿಯೇ ಮಾತಿನ ಛಾಟಿ ಬೀಸಿದ್ದಾರೆ.