newsics.com
ಬೆಂಗಳೂರು :ತೆಲುಗಿನ ಜನಪ್ರಿಯ ನಟ ಶ್ರೀಕಾಂತ್ ಹಠಾತ್ತನೆ ಧಾರವಾಡಕ್ಕೆ ಭೇಟಿ ನೀಡಿದ್ದರು. ಈ ಫೋಟೋಗಳು ವೈರಲ್ ಆಗಿವೆ.
ಹಳೆಯ ಗೆಳೆಯರನ್ನು ಭೇಟಿ ಆಗಲು ಶ್ರೀಕಾಂತ್ ಧಾರವಾಡಕ್ಕೆ ಬಂದಿದ್ದರು. ಧಾರವಾಡದ ಸಿಎಸ್ಐ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದರು ನಟ ಶ್ರೀಕಾಂತ್. ಗೆಳೆಯರ ಜೊತೆ ಕೆಲವು ಸಮಯ ಕಾಲ ಕೆಳೆದಿದ್ದಾರೆ.
ಶ್ರೀಕಾಂತ್ ತಮ್ಮ ಹುಟ್ಟೂರಾದ ಗಂಗಾವತಿಗೆ ಹೋಗುವ ಸಮಯದಲ್ಲಿ ಧಾರವಾಡಕ್ಕೆ ಭೇಟಿ ನೀಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಗಂಗಾವತಿಗೆ ತೆರಳಿದ ಶ್ರೀಕಾಂತ್.
ಅಂದಹಾಗೆ ಶ್ರೀಕಾಂತ್ ಹುಟ್ಟೂರು ಗಂಗಾವತಿ.ತೆಲುಗು ಚಿತ್ರರಂಗದ ಜನಪ್ರಿಯ ಹಾಗೂ ಹಿರಿಯ ನಟ ಶ್ರೀಕಾಂತ್. ಪೋಷಕ ನಟನಾಗಿ, ನಾಯಕನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ಶ್ರೀಕಾಂತ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.
