newsics.com
ಬೆಂಗಳೂರು: ಹೆಸರಾಂತ ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸುಮಾರು 17 ಕೋಟಿ ರೂ ವಂಚನೆ ಮಾಡಲಾಗಿದೆ. ಆರೋಪಿಗಳು ಕಂಪನಿಯ ಸುಮಾರು 17 ಕೋಟಿ ಹಣವನ್ನ ಬೇರೆ ಅಕೌಂಟ್ ಗೆ ವರ್ಗಾಹಿಸಿಕೊಂಡು ವಂಚನೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಉಂಡ ಮನೆಗೆ ದ್ರೋಹ ಬಗೆದ ಅಕೌಂಟೆಂಟ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಹರಿಕೃಷ್ಣರೆಡ್ಡಿ, ಕರುಣಾನಿಧಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ವಂಚನೆ ಸಂಬಂಧ ಬೆಂಗಳೂರು ಸೈಬರ್ ಪೊಲೀಸ್ ಠಾಣೆಗೆ ಕಂಪನಿ ಮಾಲೀಕ ಮೆಥುಕು ಶ್ರೀನಿವಾಸ್ ಅವರು ದೂರು ದಾಖಲಿಸಿದ್ದು ಆರೋಪಿಗಳನ್ನ ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿ ಹರಿಕೃಷ್ಣರೆಡ್ಡಿಯ ಲೇಡಿಸ್ ಬಾರ್ ಹುಚ್ಚು ಬಯಲಾಗಿದೆ.
ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಹಣವನ್ನ ಹರಿಕೃಷ್ಣ ರೆಡ್ಡಿ ಲೇಡಿಸ್ ಬಾರ್ ಮಾಲೀಕರಿಗೆ ಕಳುಹಿಸಿದ್ದ. ಸುಮಾರು 190 ಪಬ್ ಮಾಲೀಕರು ಹಾಗೂ ಮ್ಯಾನೇಜರ್ಗಳಿಗೆ ಹರಿಕೃಷ್ಣರೆಡ್ಡಿ ಹಣ ಕಳುಹಿಸಿದ್ದ. ಬೆಳಗ್ಗೆ ಹಣ ಹಾಕಿ ರಾತ್ರಿ ಪಬ್ ಬಾರ್ ನಲ್ಲಿ ಎಂಜಾಯ್ ಮಾಡ್ತಿದ್ದ. ನಾಲ್ಕು ವರ್ಷಗಳಿಂದ ಇದೇ ರೀತಿ ಕಂಪನಿಗೆ ಯಾಮಾರಿಸಿದ್ದ. ಗೋವಾ ಮತ್ತು ಬಾಂಬೆ ಮೂಲದ ಪಬ್ಗಳಿಗೆ ಆರೋಪಿ ಹರಿಕೃಷ್ಣರೆಡ್ಡಿ ಹಣ ಸುರಿದಿದ್ದಾನೆ. ಸದ್ಯ ಬಂಧಿತ ಆರೋಪಿಯಿಂದ 3 ಕೋಟಿ ಬೆಲೆಯ ಚಿನ್ನಾಭರಣ ನಗದು ಹಾಗೂ ಎರಡು ಮನೆ ಪತ್ರಗಳನ್ನು ಸೀಜ್ ಮಾಡಲಾಗಿದೆ.