newsics.com
ಮಡಿಕೇರಿ: ಕಾಡಾನೆ ದಾಳಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ವೃದ್ಧೆಯೊಬ್ಬರು ಬಲಿಯಾದ ಘಟನೆ ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆಯಲ್ಲಿ ನಡೆದಿದೆ.
ಮನೆಯಿಂದ ಹೊರಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು, ಕಾತಾಯಿ(72) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚೆನ್ನಯ್ಯನಕೋಟೆ ಗ್ರಾಮದಲ್ಲಿರುವ ತನ್ನ ಮಗನ ಮನೆಯಿಂದ ಬೆಳಗ್ಗೆ ಹೊರಬರುತ್ತಿದ್ದಂತೆ ಕಾಡಾನೆ ದಾಳಿ ನಡೆಸಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸುವುದರೊಂದಿಗೆ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಸಮಯಕ್ಕೆ ಕಾಂಡೋಮ್ ಬದಲಿಸಬೇಕು? ಸನ್ ಟ್ಯಾಬ್ಲಾಯ್ಡ್ ಅಧ್ಯಯನ ಹೇಳ್ತಿರೋದೇನು?
ಸೆಲ್ಫೀ ಗೀಳಿನಿಂದ ಸಂಭವಿಸುತ್ತಿರುವ ಸಾವು ಭಾರತದಲ್ಲೇ ಹೆಚ್ಚು! ಒಂದೇ ವರ್ಷ 190 ಜನ ಬಲಿ