newsics.com
ನೋಯ್ಡಾ ಮೂಲದ ಕಂಪನಿಯೊಂದರ ಮೂಲಕ ದುಬೈಗೆ ಹನಿಮೂನ್ ಗೆ ಹಾರಿದ ಜೋಡಿಗಳಿಗೆ ಭಾರಿ ಶಾಕ್ ಆಗಿದ್ದು ದಂಪತಿಗಳು ಕೊರ್ಟ್ ಮೊರೆ ಹೋಗಿದ್ದಾರೆ.
ದೆಹಲಿ ನಿವಾಸಿ ಅಂಕಿತ್ ಗುಪ್ತಾ 2022 ರಲ್ಲಿ ಮದುವೆಯಾಗಿದ್ದರು. ಹಲವು ತಿಂಗಳಿಂದ ಮಧುಚಂದ್ರಕ್ಕೆ ಎಲ್ಲಿಗೆ ಹೋಗಬೇಕೆಂದು ಕನಸು ಕಾಣುತ್ತಿದ್ದರು. ಡಿಸ್ಕಸ್ ಮಾಡಿ ಕೊನೆಗೆ, ಇಬ್ಬರೂ ದುಬೈಯನ್ನು ತಮ್ಮ ಹನಿಮೂನ್ ತಾಣವನ್ನಾಗಿ ಆರಿಸಿಕೊಂಡರು. ಅಂಕಿತ್ ನೋಯ್ಡಾ ಮೂಲದ ಟ್ರಾವೆಲ್ ಕಂಪನಿಯಿಂದ 5 ಲಕ್ಷ ರೂ.ಸದಸ್ಯತ್ವವನ್ನು ಪಡೆದಿದ್ದರು. ಹಾಗಾಗಿ ಅಂಕಿತ್ ಮತ್ತು ಅವರ ಪತ್ನಿ ದುಬೈಗೆ ಹೋಗಲು ಪ್ಲ್ಯಾನ್ ಮಾಡಿದ್ದರು.
ಕಂಪನಿಯ ನೀತಿಯ ಪ್ರಕಾರ ದುಬೈ ಪ್ರವಾಸದ ಎಲ್ಲಾ ಅರೇಂಜ್ ಮೆಂಟ್, ಟಿಕೇಟ್ ಬುಕ್ಕಿಂಗ್, ದುಬೈನಲ್ಲಿ ಹೊಟೇಲ್ ಬುಕ್ಕಿಂಗ್, ಎಲ್ಲವೂ ಇದೇ ಪ್ಯಾಕೇಜ್ ನಲ್ಲಿ ಬರಬೇಕಿತ್ತು. ಆದ್ರೆ ಆಗಿದ್ದು ಮಾತ್ರ ಬೇರೆ. ಆದರೆ ದುಬೈಗೆ ಹೋಗಿ ತಲುಪಿದ ನವ ಜೋಡಿಗಳಿಗೆ ಆಗಿದ್ದು ದೊಡ್ಡ ಶಾಕ್. 15 ನವೆಂಬರ್ 2022 ರಂದು, ಅಂಕಿತ್ ಮತ್ತು ಪತ್ನಿ ದುಬೈಗೆ ತೆರಳಲು ನಿರ್ಧರಿಸಿದ್ರು.. ಹೋಟೆಲ್ ಬುಕಿಂಗ್, ಟಿಕೆಟ್ ಸೇರಿ ಇತರೆ ವ್ಯವಸ್ಥೆ ಮಾಡುವುದಾಗಿ ನೋಯ್ಡಾ ಕಂಪನಿ ಹೇಳಿತ್ತು. ಕಂಪನಿಯನ್ನು ನಂಬಿ ಇಬ್ಬರೂ ದುಬೈ ತಲುಪಿದಾಗ, ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಯಾಕಂದ್ರೆ ಕಂಪನಿ ನೀಡಿದ ಭರವಸೆಗಳ ಪ್ರಕಾರ, ಅಲ್ಲಿ ಯಾವುದೇ ಅರೇಂಜ್ ಮೆಂಟ್ ಮಾಡಿಯೇ ಇರಲಿಲ್ಲ. ಕಂಪನಿಯು ಯಾವುದೇ ರೀತಿಯಲ್ಲಿ ಹೋಟೆಲ್, ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಿಲ್ಲ. ಇನ್ನು ನೋಯ್ಡಾ ಕಂಪನಿಗೆ ಹಲವಾರು ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದ್ರೂ ಕಂಪನಿ ಯಾವುದಕ್ಕೂ ಸರಿಯಾದ ಪ್ರತಿಕ್ರಿಯೆ ಕೊಡಲೇ ಇಲ್ಲ.
ಕೊನೆಗೆ ತಮ್ಮ ಹನಿಮೂನ್ ಹಾಳಾಗಬಾರದೆಂದು 5 ದಿನ ತಮ್ಮ ಟ್ರಾವೆಲ್, ಊಟ, ತಿಂಡಿ, ಹೊಟೇಲ್ ವೆಚ್ಚವನ್ನು ತಾವೇ ಭರಿಸಿ ದುಬೈನಲ್ಲಿ ಹನಿಮೂನ ಎಂಜಾಯ್ ಮಾಡಿ ಬಂದಿದ್ದರು.
ಇನ್ನು
ದುಬೈನಿಂದ ಹಿಂದಿರುಗಿದ ತಕ್ಷಣ ಅಂಕಿತ್ ಮೊದಲು ಮಾಡಿದ ಕೆಲಸ ಅಂದ್ರೆ ನೋಯ್ಡಾ ಮೂಲದ ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿದ್ದರು. ಇದೀಗ ಅಂಕಿತ್ ಪರವಾಗಿ ತೀರ್ಪು ಹೊರ ಬಂದಿದೆ. ಈ ವಿಷಯದ ಬಗ್ಗೆ ಕ್ರಮ ಕೈಗೊಂಡ ಆಯೋಗವು ಅಂಕಿತ್ ಗೆ 9% ಬಡ್ಡಿದರದೊಂದಿಗೆ 10 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ಕಂಪನಿಗೆ ಸೂಚಿಸಿದೆ.