newsics.com
ಚಿಕ್ಕಬಳ್ಳಾಪುರ: ರೈತನೋರ್ವ ಟೊಮೆಟೊ ತೋಟದ ಮೇಲೆ ಯಾರ ವಕ್ರ ದೃಷ್ಟಿಯೂ ಬೀಳಬಾರದು ಎಂದು ಸ್ಟಾರಿ ಸಿನಿಮಾ ನಟಿಯರಾದ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್ ಎನ್ನುವರು ತಮ್ಮ ಟೊಮೆಟೊ ತೋಟದಲ್ಲಿ ದೃಷ್ಟಿಬೊಂಬೆಗೆ ಬದಲಾಗಿ ನಟಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋವನ್ನು ಕಟ್ಟಿದ್ದಾರೆ.
5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದು, ಇನ್ನೇನು ಕಾಯಿ ಬಿಡುವ ಸಮಯವಿದೆ. ಹೀಗಾಗಿ ಟೊಮೆಟೊ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಎನ್ನುವ ಕಾರಣಕ್ಕೆ ದೃಷ್ಟಿ ಬೊಂಬೆ ಬದಲು ನಟಿಯರ ಭಾವಚಿತ್ರದ ಅಳವಡಿಸಿದ್ದಾರೆ.
ಯುವ ರೈತ ಒಳ್ಳೆ ಫಸಲು ಬರುವ ವಿಶ್ವಾಸದಲ್ಲಿದ್ದು, ಯಾರ ಕೆಟ್ಟ ಕಣ್ಣ ಬೀಳದಂತೆ ನಟಿಯರ ಫೋಟೋಗಳನ್ನು ನೇತಾಕಿದ್ದಾನೆ. ಇದು ನೋಡಗರ ಅಚ್ಚರಿಗೆ ಕಾರಣವಾಗಿದ್ದು, ಕೆಲವರು ಮುಸಿ ಮುಸಿ ನಕ್ಕಿದ್ದಾರೆ.