newsics.com
ಹಾವೇರಿ: ಇಷ್ಟ ಪಡುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ ಶೆಡ್ಗೆ ಕರೆಸಿಕೊಂಡು ಹತ್ಯೆ ಮಾಡಿರುವ ಘಟನೆಯನ್ನು ಹಾನಗಲ್ ಪೊಲೀಸರು ಬೇಧಿಸಿದ್ದಾರೆ.
ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಯುವತಿಯನ್ನ ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪ ಗ್ರಾಮದ ಯುವಕ ವೀರೇಶ ಪ್ರೀತಿಸುತ್ತಿದ್ದ. ಅಂಕಿತಾ ಮನೆಯವರಿಗೆ ಪ್ರೀತಿ ವಿಷಯ ತಿಳಿದ ಮೇಲೆ ವೀರೇಶನನ್ನು ಮದುವೆ ಮಾಡಿಸುವುದಾಗಿ ಯುವತಿ ಪೋಷಕರು ಹೇಳಿದ್ದಾರೆ. ಅಕ್ಕಿ ಆಲೂರಿಗೆ ಕರೆಸಿ ತಮ್ಮದೇ ಶೆಡ್ ಒಂದರಲ್ಲಿ ಹತ್ಯೆಗೈದಿದ್ದಾರೆ. ಮೃತ ದೇಹವನ್ನು ವೀರೇಶ ತಂದಿದ್ದ ಸ್ನೇಹಿತನ ಇನೋವಾ ಕಾರಿನಲ್ಲಿ ಸಾಗಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತೊಗರ್ಸಿ ಬಳಿಯ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ.
ಕಾರು ಸಮೇತ ಮೃತದೇಹ ಸುಟ್ಟಿದ್ದ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ