newsics.com
ಬೆಂಗಳೂರು: ಆಲ್ ಇಂಡಿಯಾ ರೇಡಿಯೋದಲ್ಲಿ ಕಳೆದ 50 ವರ್ಷಗಳಿಂದ ಸಂಸ್ಕೃತ ವಾರ್ತೆ ಪ್ರಸಾರವಾಗುತ್ತಿದೆ. ಈ ಐವತ್ತು ವರ್ಷದ ಮೈಲಿಗಲ್ಲು ಮುಟ್ಟಿದ ಸಂದರ್ಭವನ್ನು ನರೇಂದ್ರ ಮೋದಿ ಸ್ಮರಿಸುತ್ತಾ, ಬೆಂಗಳೂರಿನ ಕಬ್ಬನ್ ಪಾರ್ಕ್ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮವನ್ನೂ ಪ್ರಸ್ತಾಪಿಸಿ ಮೆಚ್ಚಿಕೊಂಡಿದ್ದಾರೆ.
ಕಬ್ಬನ್ ಪಾರ್ಕ್ ನಲ್ಲಿ ವಾರಾಂತ್ಯದಲ್ಲಿ, ಅಂದರೆ ಭಾನುವಾರಗಳಲ್ಲಂದು ಸಂಸ್ಕೃತ ಸಂವಾದ ಕಾರ್ಯಕ್ರಮ ನಡೆಯುತ್ತದೆ. ವೀಕೆಂಡ್ ಸಂಸ್ಕೃತ ಎಂದೇ ಜನಪ್ರಿಯವಾದ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಬೆಂಗಳೂರಿಗರು ಭಾನುವಾರ ಕಬ್ಬನ್ ಪಾರ್ಕ್ನಲ್ಲಿ ಸೇರಿ ಸಂಸ್ಕೃತದಲ್ಲೇ ಸಂವಾದ ನಡೆಸುತ್ತಾರೆ. ಸಂಸ್ಕೃತದಲ್ಲೇ ಮಾತುಕತೆ, ಸಂವಾದ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ 111ನೇ ಎಪಿಸೋಡ್ನ ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಂಸ್ಕೃತ ಸಂವಾದ ಕಾರ್ಯಕ್ರಮಗಳ ರೂವಾರಿ 23 ವರ್ಷದ ಯುವತಿ ಸಮಷ್ಠಿ ಗುಬ್ಬಿ. ಇವರ ಆನ್ಲೈನ್ ಪ್ರೊಡಕ್ಷನ್ ಕಂಪನಿಯಾದ ‘ಸ್ಥಾಯಿ’ ಮೂಲಕ ಹಲವು ಸಂಸ್ಕೃತ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಸಂಸ್ಕೃತ ಕಲಿಯಲು ಆಸಕ್ತರಾಗಿರುವವರಿಗೆ ಆನ್ಲೈನ್ ಕ್ಲಾಸ್ಗಳನ್ನೂ ಇವರು ನಡೆಸುತ್ತಾರೆ.
ಕಿಂ ಭೋ ಎಂದೇ ಜನಪ್ರಿಯವಾಗಿದೆ. ಕಿಂ ಭೋ ಎಂದರೆ ಸಂಸ್ಕೃತದಲ್ಲಿ ಏನ್ ಸಮಾಚಾರ ಎಂದು. ಭಾನುವಾರ ಬೆಳಗ್ಗೆ 6:45ಕ್ಕೆ ಆರಂಭವಾಗುತ್ತದೆ. ಸಂಸ್ಕೃತ ಕಲಿಕೆ, ಸಂವಾದ, ಹಾಡು, ಆಟ, ನಲಿ ಕಲಿ ಇತ್ಯಾದಿ ಎಲ್ಲವೂ ಇರುತ್ತದೆ.