newsics.com
ಘಾಜಿಯಾಬಾದ್(ಉತ್ತರ ಪ್ರದೇಶ): ಕಾರಲ್ಲಿ ರಾತ್ರಿ ಮಲಗಿದ್ದ ಚಾಲಕ ಬೆಳಗ್ಗೆ ಎದ್ದೇಳಲೇ ಇಲ್ಲ. ಕಾರಿನೊಳಗೇ ಕ್ಯಾಬ್ ಚಾಲಕ ಮೃತಪಟ್ಟ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಕಾರಿನ ಎಸಿ ಆನ್ ಮಾಡಿ ಮಲಗಿದ್ದಾರೆ. ಗಡದ್ ನಿದ್ದೆಗೆ ಜಾರಿದ್ದ ಚಾಲಕ ಮೃತಪಟ್ಟಿದ್ದಾನೆ. ತನಿಖೆ ನಡೆಸಿದ ಪೊಲೀಸರು ಸಾವಿನ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆ.
36 ವರ್ಷದ ಕಲ್ಲು ದುಬೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಲೇಶ್ ಪಾಂಡೆ ಕ್ಯಾಬ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಲ್ಲು ದುಬೆ ಭಾನುವಾರ ಸಂಜೆಯಾಗುತ್ತಿದ್ದಂತೆ ಬಾರ್ ಪಕ್ಕ ಕಾರು ನಿಲ್ಲಿಸಿ ತೆರಳಿದ್ದಾರೆ. ಕ್ಯಾಬ್ ಬಾರ್ನಲ್ಲಿ ಕಂಠಪೂರ್ತಿ ಕುಡಿದು ಮರಳಿದ್ದಾನೆ. ಕಾರು ಹತ್ತಿದ ಕಲ್ಲು ದುಬೆಗೆ ಚಲಾಯಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಕಾರು ಸ್ಟಾರ್ಟ್ ಮಾಡಿ ಎಸಿ ಆನ್ ಮಾಡಿದ್ದಾನೆ. ಬಳಿಕ ಕಾರಿನಲ್ಲೇ ಮಲಗಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಜು ಒಡೆದ ಕಾರಿನ ಡೋರ್ ಒಪನ್ ಮಾಡಿದ್ದಾರೆ. ಈ ವೇಳೆ ಕಲ್ಲು ದುಬೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ಕಾರು ಸಂಪೂರ್ಣ ತನಿಖೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೀಗ ಮರಣೋತ್ತರ ವರದಿ ಬಂದಿದೆ.
ಕುಡಿದ ಕಾರಣ ಈತನಿಗೆ ಎಚ್ಚರವಾಗಿಲ್ಲ. ಇತ್ತ ಕಾರಿನ ಪೆಟ್ರೋಲ್ ಖಾಲಿಯಾಗಿ ಎಂಜಿನ್ ಆಫ್ ಆಗಿದೆ. ಕಾರು ಸಿಎನ್ಜಿ ಕಿಟ್ ಇದ್ದರೂ ಎದ್ದು ಆನ್ ಮಾಡಲು ಸಾಧ್ಯವಾಗಿಲ್ಲ. ನಿದ್ದೆಯಲ್ಲಿ ಇದ್ಯಾವುದು ಗೊತ್ತಾಗಿಲ್ಲ. ಹೀಗಾಗಿ ಕಾರಿನೊಳಗೆ ಗಾಳಿಯಾಡದ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಕೇರಳದಲ್ಲಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ: ವಿಜ್ಞಾನಿಗಳಿಗೆ ಅಚ್ಚರಿ