newsics.com
ನವದೆಹಲಿ: ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ನಾನಾ ರೀತಿ ಕಸರತ್ತು ಮಾಡುತ್ತಾರೆ. ಅದೇ ರೀತಿ ಉದ್ಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಅಭ್ಯರ್ಥಿ ನೀಡಿದ ಉತ್ತರವೊಂದು ಕಂಪನಿಯ ಸಿಇಒ ಮೆಚ್ಚುಗೆಗೆ ಪಾತ್ರವಾಗಿದೆ.
ಅರ್ವಾ ಹೆಲ್ತ್ ಕಂಪನಿಯ ಸಂಸ್ಥಾಪಕಿ ಹಾಗೂ ಸಿಇಒ ದೀಪಾಲಿ ಬಜಾಜ್, ತಮ್ಮ ಕಂಪನಿಯ ಸ್ಟಾಕ್ ಎಂಜಿನಿಯರ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದರು.
ಕಂಪನಿಯ ಉದ್ಯೋಗ ಮಾಹಿತಿ ಹೊರಬೀಳುತ್ತಿದ್ದಂತೆ ಸಾವಿರಾರು ಅರ್ಜಿಗಳು ಬಂದಿವೆ. ಈ ಪೈಕಿ ಅರ್ಹರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಆದರೂ ಉತ್ತಮ ಅಭ್ಯರ್ಥಿ ಹುಡುಕಾಟದಲ್ಲಿದ್ದ ದೀಪಾಲಿ ಬಜಾಜ್ಗೆ ಒಂದು ಅರ್ಜಿ ಭಾರಿ ಕುತೂಹಲ ಮೂಡಿಸಿತ್ತು.
https://x.com/dipalie_/status/1801171464684757283?ref_src=twsrc%5Etfw%7Ctwcamp%5Etweetembed%7Ctwterm%5E1801171464684757283%7Ctwgr%5E7bedc1a472eea22c56565b99ae903f312ad985f9%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fdipalie_%2Fstatus%2F1801171464684757283%3Fref_src%3Dtwsrc5Etfw
ಈ ಕೆಲಸಕ್ಕೆ ತಾನು ಹೇಗೆ ಸೂಕ್ತ ಅನ್ನೋದನ್ನು ವಿವರಿಸಲು ಕಂಪನಿ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ ಅಭ್ಯರ್ಥಿ, ನನ್ನಲ್ಲಿರುವ ಕೌಶಲ್ಯದಿಂದ ನಾನು ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲೆ. ನನಗೆ ಈ ಕೆಲಸ ಸಿಗದಿದ್ದರೆ, ನಾನು ಬಾಲ್ಯದ ಗೆಳತಿಯನ್ನು ಮದುವೆಯಾಗಲು ಸಾಧ್ಯವಿಲ್ಲ.
ಏಕೆಂದರೆ ಆಕೆಯ ತಂದೆ ಕೆಲಸವಿಲ್ಲದವನಿಗೆ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಾರೆ. ಈ ಕೆಲಸ ಸಿಕ್ಕಿದರೆ ಮಾತ್ರ ಆಕೆಯನ್ನು ಮದುವೆಯಾಗಲು ಸಾಧ್ಯ ಎಂದು ಉತ್ತರಿಸಿದ್ದಾರೆ.
ದೀಪಾಲಿ ಬಜಾಜ್ ಈತನ ಉತ್ತರದ ಸ್ಕ್ರೀನ್ಶಾಟ್ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡುವುದೂ ಒಂದು ರೀತಿ ಫನ್ ಎಂದು ಬರೆದುಕೊಂಡಿದ್ದಾರೆ. ಈ ಸ್ಕ್ರೀನ್ಶಾಟ್ ವೀಕ್ಷಿಸಿದ ನೆಟ್ಟಿಗರು, ಈ ಅಭ್ಯರ್ಥಿಯನ್ನು ಕೆಲಸಕ್ಕೆ ಆಯ್ಕೆ ಮಾಡಲು ಸೂಚಿಸಿದ್ದಾರೆ. ಈತ ನೇರವಾಗಿ ಉತ್ತರಿಸಿದ್ದಾನೆ. ಸ್ಪಷ್ಟ ಹಾಗೂ ನೇರ ಉತ್ತರ ನೀಡಿದ ಈ ಅಭ್ಯರ್ಥಿಗೆ ಕೆಲಸ ನೀಡಿದರೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಎಂದು ಹಲವರು ಸೂಚಿಸಿದ್ದಾರೆ.