newsics.com
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಒಂದು ವಾರದಿಂದ ಹವಾಮಾನದಲ್ಲಿ ಭಾರೀ ಬದಲಾವಣೆಯಾಗಿದೆ. ಒಂದೇ ದಿನದಲ್ಲಿ ಬಿಸಿಲು, ಮಳೆ ಹಾಗೂ ಚಳಿಯ ಅನುಭವವಾಗುತ್ತಿದೆ.
ಇದರಿಂದಾಗಿ ಹೆಚ್ಚಿನ ಮಂದಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ವೈರಲ್ ಫೀವರ್, ಕೆಮ್ಮು, ನೆಗಡಿ, ಶೀತ ಹಾಗೂ ತಲೆನೋವು ಬಾಧಿಸುತ್ತಿದೆ. ವಾಂತಿ-ಭೇದಿ, ಗಂಟಲು ಸೋಂಕು ಕೂಡ ಹೆಚ್ಚಾಗಿದೆ.
ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ವಯಸ್ಕರಿಂದ ಹಿಡಿದು ಮಕ್ಕಳವರೆಗೂ ಜ್ವರ, ಕೆಮ್ಮು, ಶೀತ, ಡೆಂಗ್ಯೂ, ಚಿಕೂನ್ ಗುನ್ಯಾ, ವಾಂತಿಯಂತಹ ಪ್ರಕರಣಗಳು ಹೆಚ್ಚಳವಾಗಿದ್ದು, ಆರೋಗ್ಯದ ಮೇಲೆ ನಿಗಾ ಇರಿಸುವಮಂತೆ ವೈದ್ಯರು ಸಲಹೆ ನೀಡಿದ್ದಾರೆ.
ಸಲಹೆಗಳು ಏನು?
– ಮಳೆ ಸಂಧರ್ಭದಲ್ಲಿ ಬೆಚ್ಚಗೆ ಬಟ್ಟೆ ಧರಿಸುವುದು.
– ಮಕ್ಕಳಿಗೆ ಬಿಸಿ ನೀರು ಹೆಚ್ಚು ಕೊಡುವುದು.
– ಮಳೆಯಲ್ಲಿ ನೆನೆಯದೇ ಇರುವುದು.
– ಉಸಿರಾಟದ ಸಮಸ್ಯೆ ಇರುವವರು ಮನೆಯಿಂದ ಹೊರ ಬರದಿರುವುದು.
– ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು.
– ಸಾಧ್ಯವಾದಷ್ಟೂ ಮನೆ ಊಟವನ್ನೇ ಮಾಡುವುದು.
ನೀರು ಕುಡಿಯುವಂತಿಲ್ಲ, ವಾಶ್ ರೂಮ್ಗೆ ಹೋಗುವಂತಿಲ್ಲ; ಇದೇನಿದು ಈ ಕಂಪನಿಯ ಹೊಸ ವರಸೆ?