newsics.com/ನ್ಯೂಸಿಕ್ಸ್
ರಾಮ್ ಚರಣ್ ಅಭಿನಯದ ಪೆದ್ದಿ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲು ಸಾಲು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲವೆಂದು ನಾಯಕಿ ಜಾನ್ವಿ ಕಪೂರ್ ಪ್ರಚಾರದಿಂದ ದೂರ ಉಳಿದಿರುವುದು ಚರ್ಚೆಗೆ ಕಾರಣವಾಗಿದೆ.
ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ಜಾಹ್ನವಿಗೆ ಸಿಕ್ಕಿರುವುದು ಕೇವಲ ಒಂದು ಹಾಡು ಮತ್ತು ಕೆಲವೇ ಕೆಲವು ದೃಶ್ಯಗಳ ಅತಿಥಿ ಪಾತ್ರವಂತೆ. ಈ ಹಿಂದೆ ಜೂನಿಯರ್ ಎನ್ಟಿಆರ್ ಅವರ ‘ದೇವರ’ ಚಿತ್ರದಲ್ಲೂ ಜಾಹ್ನವಿ ಕಪೂರ್ ಪಾತ್ರಕ್ಕೆ ಅಷ್ಟೇನೂ ಸ್ಕೋಪ್ ಇರಲಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಅದೇ ಕಹಿ ಅನುಭವ ಇಲ್ಲಿಯೂ ಮರುಕಳಿಸಬಾರದು ಎಂಬ ಕಾರಣಕ್ಕೆ ಜಾಹ್ನವಿ ಕಪೂರ್ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೇವಲ ನಾಯಕಿಯ ಸಮಸ್ಯೆಯಷ್ಟೇ ಅಲ್ಲ, ‘ಪೆದ್ದಿ’ ಚಿತ್ರಕ್ಕೆ ಈಗ ನೈಜಾಂ ಏರಿಯಾದಲ್ಲಿ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಚಿತ್ರಮಂದಿರಗಳ ಬಾಡಿಗೆ ಮತ್ತು ಲಾಭದ ಹಂಚಿಕೆ ವಿಚಾರವಾಗಿ ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವೆ ಭಾರಿ ವಿವಾದ ಉಂಟಾಗಿದೆ. ಈಗಾಗಲೇ ಎರಡು ಬಾರಿ ಬಿಡುಗಡೆ ಮುಂದೂಡಲ್ಪಟ್ಟಿರುವ ಈ ಚಿತ್ರ ಜೂನ್ 4ಕ್ಕೆ ಬರಬೇಕಿದೆ. ಆದರೆ, ಪ್ರದರ್ಶಕರು ತಮ್ಮ ಬೇಡಿಕೆ ಈಡೇರದಿದ್ದರೆ ಸಿನಿಮಾವನ್ನು ಪ್ರದರ್ಶಿಸುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
Supreme Court ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 38ಕ್ಕೆ ಹೆಚ್ಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ