Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಬರೋ ಬಾಡಿಗೆ ನಂಬಿಕೊಳ್ಳುವಂತಾಗಿದೆ: ನಟ ದಿಗಂತ್‌ ಈ ರೀತಿ ಹೇಳಿದ್ಯಾಕೆ
Uncategorized

ಬರೋ ಬಾಡಿಗೆ ನಂಬಿಕೊಳ್ಳುವಂತಾಗಿದೆ: ನಟ ದಿಗಂತ್‌ ಈ ರೀತಿ ಹೇಳಿದ್ಯಾಕೆ

Share
2 Min Read
SHARE

newsics.com/ನ್ಯೂಸಿಕ್ಸ್

ನಟ ದಿಗಂತ್‌ ಚಿತ್ರರಂಗಕ್ಕೆ 20 ವರ್ಷ ಆಗಿದೆ. ಈ 20 ವರ್ಷದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಆದರೆ, ಯಾವತ್ತೂ ಸಿನಿಮಾಗಳಿಲ್ಲದೇ ಖಾಲಿ ಕುಳಿತವರಲ್ಲ. ಈಗ ಅಂತಹ ಒಂದು ಅನುಭವ ಕೂಡಾ ದಿಗಂತ್‌ ಅವರಿಗೆ ಆಗಿದೆಯಂತೆ. ಅದಕ್ಕೆ ಕಾರಣ ಕನ್ನಡ ಚಿತ್ರರಂಗದಲ್ಲಿನ ಗೆಲುವಿನ ಕೊರತೆ.

ಇತ್ತೀಚೆಗಷ್ಟೇ ದಿಗಂತ್‌ ಅವರ ರುದ್ರ ನಾಗ ಸಿನಿಮಾ ಸೆಟ್ಟೇರಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದಿಗಂತ್‌, ಇವತ್ತಿನ ಈ ಪರಿಸ್ಥಿತಿಗೆ ಕಾರಣ ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬಾರದಿರುವುದು. ಸಿನಿಮಾ ಗೆದ್ದಾಗ ಚಿತ್ರರಂಗ ಚೆನ್ನಾಗಿ ಇರುತ್ತದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಲು ಹೊಸ ನಿರ್ಮಾಪಕರು ಭಯಪಡುತ್ತಾರಂತೆ ಎನ್ನುತ್ತಾರೆ.

ಈ ಅನುಭವದ ಕುರಿತು ಮಾತನಾಡುವ ದಿಗಂತ್‌, ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೆ. ಆದರೆ, ನಿರ್ಮಾಪಕರು ಬಂದು ಸದ್ಯ ಪರಿಸ್ಥಿತಿ ಸರಿ ಇಲ್ಲ ಈಗ ಸಿನಿಮಾ ಮಾಡೋದು ಬೇಡ ಎಂದರು. ಆಗಲೇ ನನಗೆ ಗೊತ್ತಾಗಿದ್ದು, ಪರಿಸ್ಥಿತಿ ಸರಿಯಿಲ್ಲ ಎಂದು. ಏನು ಮಾಡೋದು, ಬೇರೆ ಕೆರಿಯರ್‌ ಹುಡುಕಬೇಕಾ ಎಂಬ ಯೋಚನೆ ಬಂತು.

ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳೋದಾ ಅಥವಾ ಯಾವುದಾದರೂ ಕೋಸ್‌ ಮಾಡೋದಾ ಎಂಬ ಯೋಚನೆ ಬಂದಿದ್ದು ಸುಳ್ಳಲ್ಲ. ಏಕೆಂದರೆ ನಾನು ವರ್ಷಪೂರ್ತಿ ಬಿಝಿ ಇದ್ದವನು, ಸೋಲು-ಗೆಲುವು ಏನೇ ಇರಬಹುದು, ಕೈ ತುಂಬಾ ಕೆಲಸ ಇತ್ತು. ಆದರೆ, ಮೊದಲ ಬಾರಿಗೆ ಸಿನಿಮಾಕ್ಕಾಗಿ ಎದುರು ನೋಡುವಂತಾಗಿದೆ ಎನ್ನುತ್ತಾರೆ.

ನಂದಿ ಹಿಲ್ಸ್‌ ಬಳಿ ನನ್ನದೊಂದು ಗೇಟೆಡ್‌ ಕಮ್ಯುನಿಟಿಯಲ್ಲಿ ಮನೆ ಇದೆ. ಈಗ ಆ ಮನೆಯನ್ನು ಬಾಡಿಗೆಗೆ ಬಿಟ್ಟಿದ್ದೇನೆ. ಆ ಬಾಡಿಗೆಯನ್ನೂ ಈಗ ನಂಬಿಕೊಳ್ಳುವಂತಾಗಿದೆ ಎನ್ನುವ ಮೂಲಕ ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಹೇಳುತ್ತಾರೆ ದಿಗಂತ್‌.

ದಿಗಂತ್‌ ಹೇಳುವಂತೆ ಇಂತಹ ಪರಿಸ್ಥಿತಿ ಇರೋದು ಕನ್ನಡದಲ್ಲಿ ಮಾತ್ರ. ಅದೇ ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲಿ ಸಿನಿಮಾ ಕೆಲಸಗಳು ಜೋರಾಗಿ ನಡೆಯುತ್ತಿವೆ. ಸಿನಿಮಾ ಆರಂಭವಾಗುತ್ತಿದ್ದಂತೆ ಬಿಜಿನೆಸ್‌ ಕೂಡಾ ಆಗುತ್ತಿದೆ. ಆದರೆ, ಕನ್ನಡದಲ್ಲಿ ಅಂತಹ ಸಹಕಾರ ಸಿಗುತ್ತಿಲ್ಲ ಎನ್ನುವ ದಿಗಂತ್‌, ಇವತ್ತು ಚಿತ್ರಮಂದಿರಗಳು ದುಬಾರಿಯಾಗಿರೋದು ಕೂಡಾ ಜನ ಚಿತ್ರಮಂದಿರಕ್ಕೆ ಬಾರದಿರಲು ಒಂದು ಕಾರಣ ಎನ್ನುತ್ತಾರೆ.

ಆಪ್ ಗೆ ದೊಡ್ಡ ಹೊಡೆತ; ಗುಡ್ ಬೈ ಹೇಳಿದ ಚಡ್ಡಾ

TAGGED:It's like trusting the rent: Why did actor Digant say this?
Share This Article
Facebook Twitter Copy Link Print
Previous Article ಆಪ್ ಗೆ ದೊಡ್ಡ ಹೊಡೆತ; ಗುಡ್ ಬೈ ಹೇಳಿದ ಚಡ್ಡಾ
Next Article Paytm Payments Bank closed ತಕ್ಷಣದಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಂದ್: RBI ನಿರ್ಧಾರಕ್ಕೇನು ಕಾರಣ?

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?