newsics.com
ಚಿತ್ತೋರ್ಗಢ(ರಾಜಸ್ಥಾನ): ಇಲ್ಲಿನ ಶ್ರೀ ಸನ್ವಾಲಿಯಾಜಿ ದೇವಸ್ಥಾನ ಮಂಡಳಿಯ ಉದ್ಯೋಗಿ ರಾಜೇಂದ್ರ ಶರ್ಮಾ ಎಂಬವರು ತಮ್ಮ ಮಗಳು ಆಯುಷಿ ಅವರ ವಿವಾಹವನ್ನು ಗೋಶಾಲೆಯಲ್ಲೇ ನೆರವೇರಿಸಿ, ಗಮನ ಸೆಳೆದಿದ್ದಾರೆ. ಹಸುಗಳ ಸಮ್ಮುಖದಲ್ಲಿ ವಿವಾಹ ಪ್ರತಿಜ್ಞೆಗಳ ವಿನಿಮಯ ನಡೆಯಿತು. ಸರಳವಾಗಿ ನಡೆದ ಮದುವೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜೇಂದ್ರ ಶರ್ಮಾ ಅವರ ಗುರುಗಳಾದ ಧೀರೇಂದ್ರ ಶಾಸ್ತ್ರಿ ದೇವಾಲಯ ಅಥವಾ ಗೋಶಾಲೆಯಲ್ಲಿ ವಿವಾಹ ವಿಧಿಗಳನ್ನು ನಡೆಸುವಂತೆ ಸಲಹೆ ನೀಡಿದ್ದರು. ಹಿಂದೂ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರವೆಂದು ಮತ್ತು ಅದರ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ವಿವಾಹ ನೆರವೇರಿಸುವಂತೆ ಶಾಸ್ತ್ರಿ ಸಲಹೆ ನೀಡಿದ್ದರು. ಗುರುಗಳ ಸಲಹೆಯಂತೆ ರಾಜೇಂದ್ರ ಶರ್ಮಾ ತಮ್ಮ ಮಗಳ ಮದುವೆಯನ್ನು ಸನ್ವಾಲಿಯಾಜಿಯಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಚಿಕರ್ಡಾ ಪಟ್ಟಣದಲ್ಲಿರುವ ಶ್ರೀ ಮಹಾವೀರ ಗೋಶಾಲೆಯಲ್ಲಿ ಹಸುಗಳ ಮುಂದೆ ನೆರವೇರಿಸಿದ್ದಾರೆ. ಹಸುಗಳಿಗೆ 56 ಬಗೆಯ ನೈವೇದ್ಯವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ವಿವಾಹಕ್ಕೂ ಮುನ್ನ ಗೋಶಾಲೆಯಲ್ಲಿರುವ ಹಸುಗಳಿಗೆ ಶಾಸ್ತ್ರೋಕ್ತ 56 ನೈವೇದ್ಯಗಳನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಬಲೋಟಿಯಾ ಕುಟುಂಬ ಸದಸ್ಯರು “ಗೋಮಾತಾ ಕಿ ಜೈ” ಮತ್ತು “ಶ್ರೀ ಸಂವಾಲಿಯಾ ಸೇಠ್” ಎಂಬ ಘೋಷಣೆಗಳನ್ನು ಕೂಗಿದರು.
ರಾಜೇಂದ್ರ ಶರ್ಮಾ ಅವರು ಶ್ರೀ ಸನ್ವಾಲಿಯಾ ದೇವಾಲಯ ಮಂಡಳಿಯ ಉದ್ಯೋಗಿಯಾಗಿದ್ದು, ಅಪಾರ ಭಕ್ತಿ ಹೊಂದಿದ್ದಾರೆ. ಏ.18ರಂದು ನಡೆದ ವಿವಾಹ ಸಮಾರಂಭದಲ್ಲಿ ರಾಜೇಂದ್ರ ಶರ್ಮಾ ಅವರು ಭಗವಾನ್ ಸನ್ವಾಲಿಯಾ ಸೇಠ್ ದೇವಾಲಯದಲ್ಲಿ ಬೆಳ್ಳಿ ಸಿಂಹಾಸನ ಸಹಿತ 56 ಕಾಣಿಕೆಗಳನ್ನು ಅರ್ಪಿಸಿದರು. ಈ ಸಿಂಹಾಸನವನ್ನು ಸುಮಾರು ಒಂದು ಕಿಲೋಗ್ರಾಂ ಬೆಳ್ಳಿ ಬಳಸಿ ಮರದಲ್ಲಿ ನಿರ್ಮಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಗಳಿಗೆ ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್
ಯೋಗೇಶ್ ಗೌಡ ಹತ್ಯೆ ಪ್ರಕರಣ : ಸುಳ್ಳು ಸಾಕ್ಷ್ಯ ನೀಡಿದ್ದ ಖಾಕಿ ಆಟ ಬಯಲು
ಜಾಗತಿಕ ಮಟ್ಟದ ಪ್ರಭಾವಿ ವ್ಯಕ್ತಿಗಳ ಪತನ : ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!