newsics.com
ಕರ್ನಾಟಕ ಅಂದ್ರೆ ಕನ್ನಡ ನೆನಪಾಗುತ್ತೆ. ಕನ್ನಡವನ್ನ ದೇವರಂತೆ ಪೂಜಿಸುತ್ತಾರೆ ಇಲ್ಲಿನ ಜನ. ಇನ್ನು ಬೆಂಗಳೂರು ಅಂದ್ರೆ ಸಾಕು ಹಲವು ಭಾಷೆಯ, ಹಲವು ಸಂಸ್ಕೃತಿಯ ಜನ ಇಲ್ಲಿ ಒಗ್ಗೂಡುತ್ತಾರೆ. ಆದ್ರೆ ಅದೆಷ್ಟೇ ಪರಭಾಷೆಯ ಜನ ಬಂದರೂ ಬೆಂಗಳೂರು ಯಾರನ್ನೂ ಬಿಟ್ಟುಕೊಟ್ಟಿಲ್ಲ. ಬಂದವರಿಗೆಲ್ಲರಿಗೂ ಉದ್ಯೋಗವಕಾಶ, ವೇದಿಕೆಗಳನ್ನು ನೀಡಿದೆ. ಆದ್ರೆ ಇತ್ತೀಚೆಗೆ ಕನ್ನಡಿಗರಿಗಿಂತಲೂ ಪರಭಾಷಿಕರ ದೌರ್ಜನ್ಯ, ದಬ್ಬಾಳಿಕೆಯೇ ಜಾಸ್ತಿ ಆಗಿದೆ.
ಕರ್ನಾಟಕದ ಪ್ರಮುಖ ಬ್ಯಾಂಕ್ವೊಂದರಲ್ಲಿ ಕನ್ನಡಿಗರು ಬ್ಯಾಂಕ್ನ ಸಿಬ್ಬಂದಿಗೆ ಕನ್ನಡದಲ್ಲಿ ವ್ಯವಹರಿಸಿ ಎಂದು ಕೇಳಿದರೆ, ದರ್ಪದಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ ಬೇಕಾದರೆ ಹೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ದೂರು ಕೊಡಿ ಅಂತ ಹೇಳಿರುವುದು ಸಹ ವೈರಲ್ ವಿಡಿಯೋದಲ್ಲಿದೆ.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕನ್ನಡದಲ್ಲಿ ವ್ಯವಹರಿಸುವಂತೆ ಕೇಳಿದರೆ ಸ್ಪಂದಿಸಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೈಲ್ ನೋಡಿ ಎಂದರೆ ನೋಡಲಿಲ್ಲ, ನಾನು ಹೇಳಿದೆ 1 ಗಂಟೆ ಆಗಲಿದೆ ಎಂದು ಹಿಂದಿಯಲ್ಲಿ ಸಿಬ್ಬಂದಿ ಹೇಳಿರುವುದು ಇದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ತಿಕ್ ಎನ್ನುವವರು, ಕರ್ನಾಟಕದಲ್ಲಿ ಆ ಬ್ಯಾಂಕ್ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಿ. ಅದು ಆ ಬ್ಯಾಂಕ್ನ ಸಂಪೂರ್ಣ ಭೌಗೋಳಿಕ ಮಾರುಕಟ್ಟೆಯ ನಷ್ಟವಾಗುತ್ತದೆ. ಅವರು ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದರೆ, ಅವರು ಆ ವ್ಯವಹಾರವನ್ನು ನಡೆಸಲು ಸಾಕಷ್ಟು ಯೋಗ್ಯರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಯ್ಯರ್ ಶ್ರೀಧರ್ ಎನ್ನುವವರು ಬ್ಯಾಂಕ್ಗಳಲ್ಲಿ ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಎನ್ನುವ ವಿಷಯವು ಹದಗೆಡುತ್ತಿದೆ.
ಮೂಲಭೂತ ವಿಷಯವೆಂದರೆ ಒಬ್ಬ ಸಿಬ್ಬಂದಿ ನಿಯೋಜನೆಗೊಂಡರೆ ಆ ಪ್ರದೇಶದ ಸ್ಥಳೀಯ ಭಾಷೆಯನ್ನು ಕಲಿಯಬೇಕು. ಇದು ಮುಖ್ಯ ವಿಷಯ ಒಬ್ಬರು ಪ್ರವಾಸಿಗರಾಗಿದ್ದರೆ ನಮಗೆ ಅರ್ಥವಾಗುತ್ತದೆ.
https://www.newsics.com/2026/04/20/these-6-body-parts-are-at-highest-risk-of-cancer-who-report/