newsics.com
ಶುಭೋದಯ
ನಿತ್ಯ ಪಂಚಾಂಗ
14 ಆಗಸ್ಟ್ 2024, ಬುಧವಾರ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 14/08/2024
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ನವಮಿ 10:23:14
ಪಕ್ಷ – ಶುಕ್ಲ
ನಕ್ಷತ್ರ – ಅನುರಾಧ 12:11:49
ಯೋಗ – ಇಂದ್ರ 16:04:28
ಕರಣ – ಕೌಳವ 10:23:14
ಕರಣ – ತೈತುಲ 22:31:04
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ – ವೃಷ್ಚಿಕ
ಸೂರ್ಯ ರಾಶಿ – ಕರ್ಕಾಟಕ
ಋತು – ವರ್ಷಾ
ಸೂರ್ಯೋದಯ 06:08:26
ಸೂರ್ಯಾಸ್ತ 18:39:50
ಹಗಲಿನ ಅವಧಿ 12:31:23
ರಾತ್ರಿಯ ಅವಧಿ 11:28:42
ಚಂದ್ರೋದಯ 13:51:27
ಚಂದ್ರಾಸ್ತ 25:22:28*
ರಾಹು ಕಾಲ 12:24 – 13:58 ಅಶುಭ
ಯಮಗಂಡ ಕಾಲ 07:42 – 09:16 ಅಶುಭ
ಗುಳಿಕ ಕಾಲ 10:50 – 12:24
ಅಭಿಜಿತ್ 11:59 – 12:49 ಅಶುಭ
ದುರ್ಮುಹೂರ್ತ 11:59 – 12:49 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನೀನು ಇನ್ನೊಬ್ಬರಿಗೆ ಮಾಡಬೇಕೆಂದಿರುವುದನ್ನು ಅವರು ನಿನಗೆ ಮಾಡಿದರೆ ಅದು ನಿನಗೆ ಹೇಗಾಗುತ್ತದೆ? ನೀನು ಮತ್ತೊಬ್ಬರ ವಿಷಯದಲ್ಲಿ ಆಡಿದಂತೆ ಅವರು ನಿನ್ನ ವಿಷಯದಲ್ಲಾಡಿದರೆ ಆಗ ನಿನಗೇನಾದೀತು? ಹೀಗೆ ಅಡಿಗಡಿಗೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವವನು ಸುಸಂಸ್ಕೃತನು.
– ಡಾ. ಡಿ.ವಿ. ಗುಂಡಪ್ಪ
***
ಈ ದಿನದ ಸುಭಾಷಿತ
ಅಜ್ಞಾನಾದಥವಾ ಜ್ಞಾನಾತ್
ಉತ್ತಮಶ್ಲೋಕನಾಮ ಯತ್ |
ಸಂಕೀರ್ತಿತಮಘಂ ಪುಂಸೋ
ದಹೇದೇಧೋ ಯಥಾಽನಲಃ ||
ಕಟ್ಟಿಗೆಯ ರಾಶಿಯನ್ನು ಅಗ್ನಿಯು ದಹಿಸುವಂತೆ, ಭಗವಂತನ ನಾಮವು, ಅರಿತೋ-ಅರಿಯದೆಯೋ ಸಂಸ್ಮರಣೆಯನ್ನು ಮಾಡುವ ಮನುಷ್ಯನ ಸಕಲ ಪಾಪಗಳನ್ನು ದಹಿಸುವುದು.
***
ಇಂದಿನ ಇತಿಹಾಸ
* ಆಗಸ್ಟ್ 14, 1777 ರಂದು ಡ್ಯಾನಿಷ್ ಭೌತವಿಜ್ಞಾನಿ ಮತ್ತು ರಾಸಾಯನಿಕ ತಜ್ಞ ಹ್ಯಾನ್ಸ್ ಕ್ರಿಸ್ಟಿಯನ್ ಓರ್ ಸ್ಟೆಡ್ ಅವರ ಜನ್ಮದಿನ. ತಂತಿಯಲ್ಲಿನ (ವಯರ್) ವಿದ್ಯುತ್ ಅಲೆಯು ಆಯಸ್ಕಾಂತೀಯ ಕಂಪಾಸ್ ನ ಸೂಜಿಯನ್ನು ಪಕ್ಕಕ್ಕೆ ಬಾಗಿಸುತ್ತದೆ ಎಂಬುದಾಗಿ ಇವರು ಮಾಡಿದ ಸಂಶೋಧನೆಯು ‘ಎಲೆಕ್ಟ್ರೋ ಮ್ಯಾಗ್ನಟಿಕ್ ಸಿದ್ಧಾಂತ’ದ ಅಭಿವೃದ್ಧಿಗೆ ಸ್ಫೂರ್ತಿ ನೀಡಿತು.
* ಕ.ಗಿ. ಕುಂದಣಗಾರ – ಸಂಶೋಧಕ, ಗ್ರಂಥ ಸಂಪಾದಕ, ಪತ್ರಕರ್ತ ಕ.ಗಿ. ಕುಂದಣಗಾರ ಅವರು ಆಗಸ್ಟ್ 14, 1892 ರಂದು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ ಜನಿಸಿದರು.
* ಪಳಕಳ ಸೀತಾರಾಮ ಭಟ್ಟ – ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು 1931 ಆಗಸ್ಟ್ 14 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಜನಿಸಿದರು. ಮೂಡುಬಿದಿರೆಯ ಜೈನ ಕಿರಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
* ಆಗಸ್ಟ್ 14, 1945 ರಂದು ಜಪಾನ್ ಬೇಷರತ್ತಾಗಿ ಶರಣಾಗತವಾಗಿದೆ ಎಂದು ಅಧ್ಯಕ್ಷ ಟ್ರೂಮನ್ ಪ್ರಕಟಿಸಿದರು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಔಪಚಾರಿಕ ಶರಣಾಗತಿಯು ಸೆಪ್ಟೆಂಬರ್ 2 ರಂದು ಯುಎಸ್ಸೆಸ್ ಮಿಸ್ಸೌರಿಯಲ್ಲಿ ನಡೆಯಿತು.
* ಆಗಸ್ಟ್ 14, 1947 ರಂದು ಪಾಕಿಸ್ತಾನವು ಭಾರತದ ಸ್ವಾತಂತ್ರ್ಯಕ್ಕೆ ಒಂದು ದಿನ ಮೊದಲು ಸ್ವಾತಂತ್ರ್ಯವನ್ನು ಸಾಧಿಸಿತು.
* ಆಗಸ್ಟ್ 14, 2002 ರಂದು ಮಹಾರಾಷ್ಟ್ರದ 14ನೇ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ನಿಧನರಾದರು.
* ಇಸ್ರೇಲಿ – ಲೆಬನಾನಿನ ಯುದ್ಧವು ಆಗಸ್ಟ್ 14, 2006 ರಂದು ಕೊನೆಗೊಂಡಿತು.