newsics.com
ಬೆಂಗಳೂರು: ಈ ವರ್ಷ 8000 ಪೊಲೀಸರ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ, ಪೊಲೀಸರ ನೇಮಕಾತಿಗಾಗಿ ಪೊಲೀಸ್ ಮಂಡಳಿ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಹೊಸದಾಗಿ ರಚನೆಯಾದ ಮಾದಕ ವಸ್ತು ವಿರೋಧಿ ಕಾರ್ಯಪಡೆಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.
ಪೊಲೀಸ್ ನೇಮಕಾತಿಗೆ ಆಡಳಿತಾತ್ಮಕವಾಗಿ ಎದುರಾಗುತ್ತಿದ್ದ ತಾಂತ್ರಿಕ ಅಡಚಣೆ ಪರಿಹರಿಸಲು ಪೊಲೀಸ್ ನೇಮಕಾತಿ ಮಂಡಳಿ ರಚಿಸುವುದಾಗಿ ಪ್ರಕಟಿಸಿದ್ದಾರೆ. ಹೊಸದಾಗಿ 12 ಪೋಲಿಸ್ ಠಾಣೆಗಳ ಸ್ಥಾಪನೆ, ಹೊಸ ವಾಹನಗಳ ವಿತರಣೆಗೆ 75 ಕೋಟಿ ರೂ. ನೀಡಲಾಗಿದೆ.