https://youtube.com/shorts/j6ilMdnEwVU?si=GV2lBgMPtg5UG3lR
Subscribe ನ್ಯೂಸಿಕ್ಸ್ ಕನ್ನಡ
newsics.com
ದೇಹಕ್ಕೆ ಬಂದ ರೋಗವನ್ನು ಗುಣಪಡಿಸಬಹುದು ಆದರೆ ಮನಸ್ಸಿಗಾದ ನೋವನ್ನು ವಾಸಿ ಮಾಡಲು ಮಾತ್ರೆ, ಔಷಧಗಳಿಂದ ಸಾಧ್ಯವಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಾನಸಿಕ ಅನಾರೋಗ್ಯ ಮತ್ತು ಒತ್ತಡ ಹೆಚ್ಚಾಗುತ್ತಿದೆ. ಜನ ಎಚ್ಛೆತ್ತುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಈ ಬಗ್ಗೆ ಅನೇಕ ರೀತಿಯ ಸಂಶೋಧನೆಗಳು ಕೂಡ ನಡೆದಿದ್ದು,ಟೆಲಿ ಮಾನಸ್ಗೆ ಮನೋ ರೋಗಿಗಳಿಂದ ಲಕ್ಷಾಂತರ ಕರೆಗಳು ಬರುತ್ತಿವೆ. ಸಿ. ಜೆ ರಾಯ್ ಹಾಗೂ ಮಕ್ಕಳ ಸೂಸೈಡ್ ಬಳಿಕ ಆರೋಗ್ಯ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ಬಯಲು ಮಾಡಿದೆ.
ಸಿಟಿಯ ವೇಗದ ಜೀವನಶೈಲಿ ಬೆಂಗಳೂರಿನ ಜನರಲ್ಲಿ ಮಾನಸಿಕ ಅನಾರೋಗ್ಯ ಮತ್ತು ಒತ್ತಡವನ್ನು ಹೆಚ್ಚಿಸಿದೆ. ಸಿ.ಜೆ. ರಾಯ್ ಘಟನೆಯ ನಂತರ, ಆತ್ಮಹತ್ಯೆ ಯೋಚನೆಗಳು ಮತ್ತು ಖಿನ್ನತೆ ಪ್ರಕರಣಗಳು ಹೆಚ್ಚಾಗಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಟೆಲಿ ಮಾನಸ್ (14416) ಸಹಾಯವಾಣಿ ಆರಂಭಿಸಿದೆ.
ಸಿಜೆ ರಾಯ್ ಹಾಗೂ ಮಕ್ಕಳ ಸೂಸೈಡ್ ಘಟನೆ ಬಳಿಕ ಆರೋಗ್ಯ ಇಲಾಖೆ ಅಚ್ಚರಿಯ ಮಾಹಿತಿ ನೀಡಿದೆ. ಒಂದೇ ವರ್ಷದಲ್ಲಿ 101,898 ಜನರಿಗೆ ಆತ್ಮಹತ್ಯೆ ಯೋಚನೆಗಳು ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಗುಪ್ತ ಖಿನ್ನತೆ ಕೇಸ್ ಹೆಚ್ಚಳ ಕಂಡಿದೆ. ಹಗಲು-ರಾತ್ರಿ ಎನ್ನದೇ ಟೆಲಿ ಮಾನಸ್ಗೆ ಮನೋ ರೋಗಿಗಳು ಕರೆ ಮಾಡುತ್ತಿದ್ದಾರೆ.
ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಫೋಟಕ ಅಂಕಿ-ಅಂಶ ಬಯಲಾಗಿದೆ. ಟೆಲಿ ಮಾನಸ್ಗೆ ಸರಾಸರಿ ಎರಡುವರೆ ಲಕ್ಷ ಜನ ಕರೆ ಮಾಡಿ ತಮ್ಮ ಖಿನ್ನತೆ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಈ ಪೈಕಿ ಪುರಷರಲ್ಲಿ 49.86%, ಮಹಿಳೆಯರಲ್ಲಿ 45.45% ಮಾನಸಿಕ ಒತ್ತಡ ಕಂಡು ಬಂದಿದೆ.
ರಾಯ್ ಅವರಂತೆ ನಗದರ ಅನೇಕ ಜನರಿಲ್ಲಿ ಗುಪ್ತ ಖಿನ್ನತೆ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಮತ್ತು ಕೆಲಸದ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ತಮಗೆ ಗೊತ್ತಿಲ್ಲದೆ ಜನರು ಖಿನ್ನತೆಗೆ ಒಳಪಡುತ್ತಿದ್ದು, ಗುಪ್ತ ಖಿನ್ನತೆಗೆ ಒಳಪಟ್ಟು ಸಾಕಷ್ಟು ಸಮಯದ ನಂತರ ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಟಿ ಜನರ ಮಾನಸಿಕ ಆರೋಗ್ಯಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯಿಂದ ಟೆಲಿ ಮಾನಸ್ ಯೋಜನೆ ಶುರು ಮಾಡಿದೆ. ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ಟೆಲಿ ಮಾನಸ್ ಸೇವೆ ಆರಂಭವಾಗಿದ್ದು, ಈಗಾಗಲೇ ಸರಾಸರಿ 2 ಲಕ್ಷ 3 ಸಾವಿರ ಜನರಿಗೆ ಚಿಕಿತ್ಸೆ ಸಲಹೆ ನೀಡಲಾಗಿದೆ.
ಖಿನ್ನತೆ ಬಗ್ಗೆ ಹೆಚ್ಚಿರುವ ಹಿನ್ನಲೆ ಆರೋಗ್ಯ ಇಲಾಖೆ ಮೂರು ಹಂತದಲ್ಲಿ ವೈದ್ಯರ ನೇಮಕ ಮಾಡಿಕೊಂಡಿದೆ. ಸಿಂಪಲ್ ಸಮಸ್ಯೆಗೆ ಜ್ಯೂನಿಯರ್ ಸೈಕಾಲಜಿಸ್ಟ್ಗಳಿಂದ ಚಿಕಿತ್ಸೆ ನೀಡಿದರೆ, ಕಷ್ಟಕರ ಕೇಸ್ಗಳಿಗೆ ಸೀನಿಯರ್ ಸೈಕಾಲಜಿಸ್ಟ್ ಸಹಾಯ ಮಾಡುತ್ತಾರೆ. ಗೊಂದಲಮಯ ಸೇರಿದಂತೆ ದೊಡ್ಡ ಸಮಸ್ಯೆಗಳಿದ್ದಾಗ ವೃತ್ತಿಪರ ವೈದ್ಯರು ಸಹಾಯ ಮಾಡುತ್ತಾರೆ. ಇದಕ್ಕಾಗಿಯೇ 14416 ಸಹಾಯವಾಣಿ ಶುರು ಮಾಡಿದ್ದು, ಯಾವುದೇ ಮುಜುಗರ ಇಲ್ಲದೇ ಸೇವೆ ಪಡೆಯಲು ಆರೋಗ್ಯ ಇಲಾಖೆ ಮನವಿ ಮಾಡಿದೆ.