https://youtube.com/shorts/Z7vopgc72sA?si=Uissn7_egIDSDOX-
Subscribe ನ್ಯೂಸಿಕ್ಸ್ ಕನ್ನಡ
newsics.com
ಕಳೆದ ವರ್ಷ ನವೆಂಬರ್ 23 ರಂದು ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಜೋಡಿ ವಿವಾಹವಾಗಬೇಕಿತ್ತು. ಆದರೆ ಸಪ್ತಪದಿ ತುಳಿಯುವ ದಿನದಂದು ಮದುವೆಯನ್ನು ಮುಂದೂಡಲಾಯಿತು. ಬಳಿಕ ಮದುವೆ ಮುರಿದು ಬಿದ್ದಿತ್ತು.
ಆದರೆ ವಿವಾಹ ಮುರಿದು ಬಿದ್ದ ನಂತರ ಗಾಯಕ ಪಲಾಶ್ ಮುಚ್ಚಲ್ ಗ್ರಹಚಾರ ಸಂಪೂರ್ಣ ಕೆಟ್ಟಂತೆ ಕಾಣುತ್ತಿದೆ.
ಪಲಾಶ್ ಮುಚ್ಚಲ್ ವಿರುದ್ಧ ಸ್ಮೃತಿ ಮಂಧಾನ ಬಾಲ್ಯ ಸ್ನೇಹಿತ ವಿದ್ನ್ಯಾನ್ ಮಾನೆ 40 ಲಕ್ಷ ಹಣದ ವಂಚನೆಯ ಆರೋಪ ಮಾಡಿ ಕೇಸ್ ದಾಖಲಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಲಾಶ್ ಮುಚ್ಚಲ್ ಕೋರ್ಟ್ಗೆ ಆಗಮಿಸಿದ ವೇಳೆ ಪಪಾರಾಜಿಗಳು ಅವರ ಹಿಂದೆ ಬಿದ್ದು, ಅವರ ವೀಡಿಯೋವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆದರೆ ನೆಟ್ಟಿಗರು ಈ ವೀಡಿಯೋದಲ್ಲಿ ಪಲಾಶ್ ಮುಚ್ಚಲ್ ನಡೆಯುತ್ತಿರುವ ರೀತಿಗೆ ವ್ಯಂಗ್ಯ ಮಾಡಿದ್ದಾರೆ.
ಸ್ಮೃತಿ ಮಂಧಾನ ಬಾಲ್ಯ ಸ್ನೇಹಿತ ವಿದ್ನ್ಯಾನ್ ಮಾನೆ ಅವರು ಪಲಾಶ್ ಮಚ್ಚಲ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಅದರ ಜೊತೆಗೆ ಅವರು ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ಮದುವೆ ಮುರಿದು ಬಿದ್ದ ದಿನ ಏನಾಯ್ತು ಎಂಬ ಹಲವು ಕುತೂಹಲಕಾರಿ ವಿಚಾರವನ್ನು ಹೇಳಿದ್ದರು. ಸ್ಮೃತಿ ಮಂಧಾನ ಮದುವೆಗಾಗಿ ಆಗಮಿಸಿದ ಭಾರತೀಯ ಮಹಿಳಾ ತಂಡದ ಕ್ರಿಕೆಟರ್ಗಳು, ಮದುವೆ ದಿನವೇ ಬೇರೆ ಮಹಿಳೆಯೊಂದಿಗೆ ಬೆಡ್ನಲ್ಲಿ ಪಲಾಶ್ ಮುಚ್ಚಲ್ನನ್ನು ನೋಡಿ ಅವರೇ ಆತನಿಗೆ ಸರಿಯಾಗಿ ಬಾರಿಸಿದ್ದರು ಎಂದು ವಿದ್ನ್ಯಾನ್ ಮಾನೆ ಹೇಳಿದ್ದರು.
ಇದೇ ಕಾರಣಕ್ಕೆ ಈಗ ನೆಟ್ಟಿಗರು ಪಲಾಶ್ ಮುಚ್ಚಲ್ ನಡಿಗೆ ನೋಡಿ ಮಹಿಳಾ ಕ್ರಿಕೆಟರ್ಗಳು ಸರಿಯಾಗಿ ನಡೆಯಲಾಗದಂತೆ ಥಳಿಸಿದ್ದಾರಾ ಎಂದು ಕೇಳ್ತಿದ್ದಾರೆ.
https://www.instagram.com/reel/DUAx-qGE_Re/?igsh=MTUwZnc3a2d5YWVtMQ==