https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ಹಿಂದೂಗಳ ಅತ್ಯಂತ ಪ್ರಮುಖವಾದ ಹಬ್ಬಗಳಲ್ಲಿ ರಥಸಪ್ತಮಿ ಕೂಡ ಒಂದಾಗಿದೆ. 2026ರಲ್ಲಿ ಜನವರಿ 25 ರಂದು ಭಾನುವಾರ ರಥಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೇಶದ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆಚರಣೆಗಳು ಇರುತ್ತವೆ. ಅದೇ ರೀತಿ ತಿರುಮಲ ತಿರುಪತಿಯಲ್ಲಿ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಾಗಿ ರಥಸಪ್ತಮಿಯನ್ನು ಆಚರಿಸಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ಹಬ್ಬವು ಸೂರ್ಯನಿಗೆ ಪ್ರಿಯವಾದ ಭಾನುವಾರವೇ ಬಂದಿರುವುದು ವಿಶೇಷವಾಗಿದೆ.
ಹಬ್ಬವು ಜನವರಿ 25, 2026 ರಂದು ಬೆಳಗ್ಗೆ 12:39 ರಿಂದ ರಾತ್ರಿ 11:10ರ ವರೆಗೆ ಇರುತ್ತದೆ. ಈ ವೇಳೆ ದೇಶದ ಅನೇಕ ಮೂಲೆಗಳಲ್ಲಿ ಜಾತ್ರೆಗಳನ್ನು ಕೈಗೊಳ್ಳುತ್ತಾರೆ. ಇದಲ್ಲದೆ, ಸೂರ್ಯನಿಗೆ ಸಮರ್ಪಿತವಾದ ಹಾಗೂ ವಿಷ್ಣುವಿಗೆ ಸಮರ್ಪಿತವಾದ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.
ಸೂರ್ಯ ಜನಿಸಿದ ಸ್ಥಳ: ಸೂರ್ಯ ಜಯಂತಿ
ಸಾಮಾನ್ಯವಾಗಿ ರಥ ಸಪ್ತಮಿಯನ್ನು ಸೂರ್ಯ ಜಯಂತಿ ಎಂದೇ ಕರೆಯಲಾಗುತ್ತದೆ. ಇದೇ ದಿನದಂದು ಕಶ್ಯಪ ಮುನಿ ಮತ್ತು ಅದಿತಿ ದಂಪತಿಗೆ ಸೂರ್ಯದೇವನು ಜನಿಸಿದರು ಎಂದು ಪುರಾಣಗಳು ಉಲ್ಲೇಖಿಸಿವೆ. ಸೂರ್ಯ ದೇವನು ‘ಆರೋಗ್ಯ ಕಾರಕ’ ನಾಗಿದ್ದು, ಅವನನ್ನು ಭಕ್ತಿಯಿಂದ ಆರಾಧಿಸಿದರೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಲಭಿಸುವುದಲ್ಲದೆ, ಚರ್ಮವ್ಯಾಧಿಗಳು ಗುಣವಾಗುತ್ತದೆ ಎಂದು ನಂಬಲಾಗಿದೆ.
ಈ ಶುಭ ದಿನದಂದು ಸೂರ್ಯದೇವನ ಆರಾಧನೆಗೆ ಮೀಸಲಾದ ದೇವಸ್ಥಾನಗಳಿಗೆ ಭೇಟಿ ನೀಡುವುದು ಅತ್ಯಂತ ಪುಣ್ಯದಾಯಕ ಎಂದೇ ಪರಿಗಣಿಸಲಾಗಿದೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಅನೇಕ ಸುಂದರ ಸೂರ್ಯ ದೇವಸ್ಥಾನಗಳಿವೆ.
1. ಕರ್ನಾಟಕದ ಪ್ರಮುಖ ದೇವಾಲಯಗಳು ಹೀಗಿವೆ…
ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧ ಸೂರ್ಯ ದೇವಸ್ಥಾನಗಳಿವೆ. ಅವುಗಳು ಹೀಗಿವೆ…
ಬನಶಂಕರಿ ಸೂರ್ಯ ದೇವಾಲಯ, ಬೆಂಗಳೂರು: ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಚೋಳನಾಯಕನಹಳ್ಳಿಯಲ್ಲಿರುವ ಈ ದೇವಾಲಯದಲ್ಲಿ ಸೂರ್ಯನಿಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ವಿಶೇಷವಾಗಿ ರಥ ಸಪ್ತಮಿಯಂದು ಅಪಾರ ಸಂಖ್ಯೆಯ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಕೊಟ್ಟೂರು ಸೂರ್ಯನಾರಾಯಣ ಸ್ವಾಮಿ ದೇವಸ್ಥಾನ, ಬಳ್ಳಾರಿ: ಬಳ್ಳಾರಿಯಲ್ಲಿ ಸೂರ್ಯನಿಗೆ ಸಮರ್ಪಿತವಾದ ಅತ್ಯಂತ ಭವ್ಯವಾದ ದೇವಸ್ಥಾನವಿದೆ. ಅದುವೇ ಕೊಟ್ಟೂರು ಸೂರ್ಯನಾರಾಯಣ ಸ್ವಾಮಿ ದೇವಸ್ಥಾನ. ಇದು ಅತ್ಯಂತ ಪುರಾತನವಾದ ಆಲಯವಾಗಿದ್ದು, ರಥ ಸಪ್ತಮಿಯಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ಸೂರ್ಯ ದೇವನ ದರ್ಶನ ಮಾಡುತ್ತಾರೆ.
ನಾರಾಯಣಪುರ ಸೂರ್ಯ ದೇವಸ್ಥಾನ, ಹುಬ್ಬಳ್ಳಿ-ಧಾರವಾಡ:
ಉತ್ತರ ಕರ್ನಾಟಕದ ಭಾಗದಲ್ಲಿ ಈ ನಾರಾಯಣಪುರ ಸೂರ್ಯ ದೇವಸ್ಥಾನವು ಸೂರ್ಯನಿಗೆ ಮುಡಿಪಾದ ಅತ್ಯಂತ ಪ್ರಸಿದ್ಧ ಸೂರ್ಯ ದೇವಸ್ಥಾನವಾಗಿದೆ.
ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನ:
ಕದ್ರಿ ಮಂಜುನಾಥ ಸ್ವಾಮಿಯನ್ನು ಸೂರ್ಯನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ. ಈ ಕಾರಣದಿಂದಲೇ ರಥ ಸಪ್ತಮಿಯಂದು ಈ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಭಾರತದಲ್ಲಿಯೂ ಅತ್ಯಂತ ಪ್ರಸಿದ್ಧ ಸೂರ್ಯ ದೇವಸ್ಥಾನಗಳಿವೆ…
ನೀವು ರಥ ಸಪ್ತಮಿಯಂದು ಹೊರ ರಾಜ್ಯಗಳಲ್ಲಿದ್ದರೆ ಭಾರತದ ಪ್ರಸಿದ್ಧ ಸೂರ್ಯ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಅವು ಹೀಗಿವೆ…
ಅರಸವಲ್ಲಿ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನ, ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿರುವ ಅತ್ಯಂತ ಪುರಾತನ ಹಾಗೂ ಶಕ್ತಿಶಾಲಿ ಸೂರ್ಯನ ದೇವಸ್ಥಾನಗಳಲ್ಲಿ ಈ ಅರಸವಲ್ಲಿ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನವು ಒಂದಾಗಿದೆ. ಇಲ್ಲಿಗೆ ವಿಶೇಷವಾಗಿ ರಥ ಸಪ್ತಮಿಯಂದು ಲಕ್ಷಾಂತರ ಜನ ಸೇರುತ್ತಾರೆ.
ತಿರುಪತಿ, ಆಂಧ್ರಪ್ರದೇಶ: ಆಂಧ್ರ ಪ್ರದೇಶದ ರಾಜ್ಯದ ತಿರುಪತಿಯಲ್ಲಿಯು ಸಹ ರಥ ಸಪ್ತಮಿಯಂದು ‘ಅರ್ಧ ಬ್ರಹ್ಮೋತ್ಸವ’ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ತಿಮ್ಮಪ್ಪ 7 ಕುದುರೆಗಳ ವಾಹನದ ಮೇಲೆ ಭಕ್ತರಿಗೆ ದರ್ಶನ ನೀಡುತ್ತಾರೆ. ಈ ಕಾರಣದಿಂದಲೇ ಸಾಕಷ್ಟು ಭಕ್ತರು ರಥ ಸಪ್ತಮಿಯಂದೇ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುತ್ತಾರೆ.
ಕೋನಾರ್ಕ್ ಸೂರ್ಯ ದೇವಾಲಯ, ಒಡಿಶಾ:
ಒಡಿಶಾದ ಕೋನಾರ್ಕ್ ಸೂರ್ಯ ದೇವಸ್ಥಾನವು ಸೂರ್ಯ ದೇವನಿಗೆ ನಿರ್ಮಿಸಲ್ಪಟ್ಟಿರುವ ಅತ್ಯಂತ ಭವ್ಯ ಆಲಯವಾಗಿದೆ. ಈ ದಿನ ಸೂರ್ಯನ ಮೊದಲ ಕಿರಣಗಳು ಗರ್ಭಗುಡಿಯನ್ನು ಸ್ಪರ್ಶಿಸುವ ಅದ್ಭುತವಾದ ಪವಾಡವನ್ನು ನೀವು ಕಣ್ತುಂಬಿಕೊಳ್ಳಬಹುದು. ಹಾಗಾಗಿ ಈ ದೇವಸ್ಥಾನಕ್ಕೆ ಹೋಗಲು ಯೋಜಿಸಿ