newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
03 ಆಗಸ್ಟ್ 2024, ಶನಿವಾರ
ಕ್ರೋಧಿ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ದಶಿ.
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 03/08/2024
ತಿಂಗಳು – ಆಗಸ್ಟ್
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ಚತುರ್ದಶಿ 15:50:03
ಪಕ್ಷ – ಕೃಷ್ಣ
ನಕ್ಷತ್ರ – ಪುನರ್ವಸು 11:57:58
ಯೋಗ – ವಜ್ರ 10:59:31
ಕರಣ – ಶಕುನಿ 15:50:03
ಕರಣ – ಚತುಷ್ಪಾದ 28:12:24*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕರ್ಕಾಟಕ
ಸೂರ್ಯ ರಾಶಿ ಕರ್ಕಾಟಕ
ಋತು- ಗ್ರೀಷ್ಮ
ಸೂರ್ಯೋದಯ 06:06:47
ಸೂರ್ಯಾಸ್ತ 18:44:38
ಹಗಲಿನ ಅವಧಿ 12:37:51
ರಾತ್ರಿಯ ಅವಧಿ 11:22:19
ಚಂದ್ರಾಸ್ತ. 18:09:58
ಚಂದ್ರೋದಯ 29:47:05*
ರಾಹು ಕಾಲ 09:16 – 10:51 ಅಶುಭ
ಯಮಗಂಡ ಕಾಲ. 14:00 – 15:35 ಅಶುಭ
ಗುಳಿಕ ಕಾಲ 06:07 – 07:42
ಅಭಿಜಿತ್ 12:00 – 12:51 ಶುಭ
ದುರ್ಮುಹೂರ್ತ 07:48 – 08:38 ಅಶುಭ
***

***
ಈ ದಿನದ ಮಾತು
ಒಳ್ಳೆಯ ಕೆಲಸ ಮಾಡಲಾರದೆ ಯಾರು ದೊಡ್ಡವರೆನಿಸಿಕೊಂಡಿಲ್ಲ. ಹಾಗೆಯೇ ಒಳ್ಳೆಯ ಕೆಲಸ ಮಾಡುವವರನ್ನು ಜಗತ್ತು ಯಾವತ್ತಿಗೂ ಚಿಕ್ಕವನೆಂದು ನಿರ್ಲಕ್ಷ್ಯ ಮಾಡುವುದಿಲ್ಲ.
***
ಇಂದಿನ ಇತಿಹಾಸ
03 ಆಗಸ್ಟ್
* ಆಗಸ್ಟ್ 03, 1492 ರಂದು ಹೊಸ ಜಗತ್ತನ್ನು ಶೋಧಿಸುವ ಗುರಿಯೊಂದಿಗೆ ಕ್ರಿಸ್ಟೋಫರ್ ಕೊಲಂಬಸ್ ಹಲವು ನಾವಿಕರೊಂದಿಗೆ ಮೊದಲ ಬಾರಿಗೆ ಸಮುದ್ರಯಾನ ಆರಂಭಿಸಿದ. ಸ್ಪೇನಿನ ಪಾಲೋಸ್ ನಿಂದ ‘ಸಾಂತಾ ಮಾರಿಯಾ’, ‘ನಿನಾ’ ಮತ್ತು ‘ಫಿಂಟ’ ಎಂಬ ಮೂರು ಹಡಗುಗಳೊಂದಿಗೆ ಕೊಲಂಬಸನ ಯಾನ ಆರಂಭಗೊಂಡಿತು.
* ಮೈಥಿಲಿ ಶರಣ್ ಗುಪ್ತ – ಗುಪ್ತರವರು ಉತ್ತರ ಪ್ರದೇಶ ರಾಜ್ಯದ, ಝಾನ್ಸಿ ತಾಲೂಕಿನ ಚಿರ್ಗಾಂವ್ ಹಳ್ಳಿಯಲ್ಲಿ 1886, ಆಗಸ್ಟ್ 03 ರಂದು ಜನಿಸಿದರು. ಮೈಥಿಲಿ ಶರಣ್ ಗುಪ್ತರವರು ಪ್ರಮುಖ ಆಧುನಿಕ ಹಿಂದಿ ಕವಿಗಳಲ್ಲೊಬ್ಬರು. ಖಾರಿ ಬೊಲಿ ಎಂಬ ಸಾಮಾನ್ಯ ಆಡುಭಾಷೆಯಲ್ಲಿ ಕವನಗಳನ್ನು ಬರೆಯುವುದರಲ್ಲಿ ಮೊದಲಿಗರಾದರು. ಇವರ ಸಮಯದಲ್ಲಿ ಹಿಂದಿ ಭಾಷೆಯ ಕೃತಿ, ಕವನಗಳು ಹೆಚ್ಚು ಜನಪ್ರಿಯವಾಗಿತ್ತು. ಮೈಥಿಲಿ ಶರಣ್ ಗುಪ್ತರವರು ರಾಷ್ಟ್ರಕವಿಯು ಹೌದು. ಗುಪ್ತರಿಗೆ ದೇಶದ ಬಗ್ಗೆ ಹೆಚ್ಚು ಕಾಳಜಿ ಇತ್ತು. ಆದ್ದರಿಂದ ಅವರು ಹೆಚ್ಚಾಗಿ ದೇಶಭಕ್ತಿಗೀತೆಗಳು ಮತ್ತು ರಾಷ್ಟ್ರಿಯತೆ ಬಗ್ಗೆ ಕವಿತೆಗಳನ್ನು ಬರೆಯುತ್ತಿದ್ದರು. ಭಾರತದ ಮೂರನೇಯ(ಆಗಿನ ಎರಡನೆಯ) ದೊಡ್ಡ ನಾಗರಿಕ ಗೌರವವಾದ ಪದ್ಮಭೂಷಣವನ್ನು ಅವರಿಗೆ ನೀಡಲಾಗಿದೆ.
* ಆಗಸ್ಟ್ 03, 1914 ರಂದು ಜರ್ಮನಿ ಫ್ರಾನ್ಸ್ ವಿರುದ್ಧ ಸಮರ ಘೋಷಣೆ ಮಾಡಿತು.
* ಚಿನ್ಮಯಾನಂದ ಸರಸ್ವತಿ – ಆಗಸ್ಟ್ 03, 1993 ರಂದು ನಿಧನರಾದರು. ‘ಭಗವದ್ಗೀತೆ’ಯನ್ನು ನಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು. ಅವರ ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸಗಳು, ಪುಸ್ತಕಗಳು ಹೀಗೆ ಭಗವದ್ಗೀತೆಯಲ್ಲಿ ಮತ್ತು ಭಾರತೀಯ ಅಧ್ಯಾತ್ಮಿಕ ತತ್ವದಲ್ಲಿ ಜನಾಸಕ್ತಿಯನ್ನು ಮೂಡಿಸಿದ ಸೇವೆಗಳು ಅದ್ವಿತೀಯವಾದದ್ದು.
* ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುತ್ರ ಮತ್ತು ಪತ್ರಕರ್ತರಾಗಿದ್ದ ದೇವದಾಸ್ ಗಾಂಧಿ ಆಗಸ್ಟ್ 03, 1957 ರಂದು ನಿಧನರಾದರು.
* ನೈಜೀರಿಯಾ ರಾಷ್ಟ್ರೀಯ ಅಸೆಂಬ್ಲಿ – ಸ್ವಾತಂತ್ರ್ಯವನ್ನು ಆಗಸ್ಟ್ 03, 1960 ರಂದು ಘೋಷಿಸಲಾಯಿತು.
* ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆ – ಆಗಸ್ಟ್ 03, 1976 ರಂದು ಸ್ಥಾಪಿಸಲಾಯಿತು.