Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೊಸದಿಲ್ಲಿ: ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ರಶ್ಯನ್ ಭಾಷೆಯ ಭಗವದ್ಗೀತೆ ಆವೃತ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ತಮ್ಮಿಬ್ಬರ ನಡುವಿನ ಮಾತುಕತೆ ವೇಳೆಯ ಭಾವಚಿತ್ರವನ್ನು ಪ್ರಧಾನಿ ಮೋದಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಭಾರತೀಯ ಕರಕುಶಲ ಮತ್ತು ಸಾಂಸ್ಕೃತಿಕ ಸಂಪತ್ತುಗಳನ್ನು ಒಳಗೊಂಡ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಇದರಲ್ಲಿ ಅಸ್ಸಾಂ ಕಪ್ಪು ಚಹಾ, ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್, ಮಹಾರಾಷ್ಟ್ರದ ಕರಕುಶಲ ಬೆಳ್ಳಿ ಕುದುರೆ, ಆಗ್ರಾದ ಅಮೃತಶಿಲೆಯ ಚೆಸ್ ಸೆಟ್, ಪ್ರೀಮಿಯಂ ಕಾಶ್ಮೀರಿ ಕೇಸರಿ ಮತ್ತು ಭಗವದ್ಗೀತೆಯ ರಷ್ಯನ್ ಅನುವಾದಿತ ಆವೃತ್ತಿ ಸೇರಿದೆ.
“ಭಗವದ್ಗೀತೆಯ ಒಂದು ಪ್ರತಿಯನ್ನು ರಶ್ಯ ಅಧ್ಯಕ್ಷ ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದೆ. ಭಗವದ್ಗೀತೆಯಲ್ಲಿನ ಬೋಧನೆ ವಿಶ್ವಾದ್ಯಂತ ಇರುವ ಕೋಟ್ಯಂತರ ಮಂದಿಗೆ ಸ್ಫೂರ್ತಿದಾಯಕವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಆಹ್ವಾನದ ಮೇರೆಗೆ 23ನೇ ಭಾರತ-ರಶ್ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ಧಾರೆ. ಇಂದು ಉಭಯ ನಾಯಕರ ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯ ವೇಳೆ 10ಕ್ಕೂ ಹೆಚ್ಚು ಒಪ್ಪಂದಗಳು ಹಾಗೂ 15ಕ್ಕೂ ಹೆಚ್ಚು ಒಡಂಬಡಿಕೆ (MOU) ಪತ್ರಗಳಿಗೆ ಸಹಿ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಚಹಾ ಎಲೆಗಳು ಮಾತ್ರವಲ್ಲ ಪುಟಿನ್ ಅವರಿಗೆ ಅದನ್ನು ಕುಡಿಯಲು ಅಲಂಕೃತ ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್ ಅನ್ನು ಸಹ ನೀಡಲಾಗಿದೆ. ಈ ಸೆಟ್ ಪಶ್ಚಿಮ ಬಂಗಾಳದ ಶ್ರೀಮಂತ ಕಲಾತ್ಮಕತೆಯನ್ನು ಪ್ರತಿಬಿಂಬಿಸುವ ಸಂಕೀರ್ಣ ಕೆತ್ತನೆಗಳನ್ನು ಹೊಂದಿದೆ. ಭಾರತ ಮತ್ತು ರಷ್ಯಾ ಎರಡು ದೇಶಗಳಲ್ಲೂ ಚಹಾಕ್ಕೆ ಆಳವಾದ ಸಾಂಸ್ಕೃತಿಕ ಪ್ರಾಮುಖ್ಯತೆ ಇದೆ. ಇದು ರೈಲ್ವೆ ನಿಲ್ದಾಣದಲ್ಲಿ ಚಹಾವನ್ನು ಮಾರಾಟ ಮಾಡುವುದರಿಂದ ರಾಷ್ಟ್ರದ ನಾಯಕನಾಗುವವರೆಗಿನ ಪ್ರಧಾನಿ ಮೋದಿಯವರ ಜೀವನದ ಹಾದಿಯನ್ನು ಕೂಡ ನೆನಪಿಸುತ್ತದೆ.