Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Musk’s AI statement raises fears ಎಐ ಎಫೆಕ್ಟ್‌ನಿಂದ 20 ವರ್ಷಗಳಲ್ಲಿ ಜನರಿಗೆ ಕೆಲಸವೇ ಇರಲ್ಲ: ಭಯ ಹೆಚ್ಚಿಸಿದ ಮಸ್ಕ್ ಹೇಳಿಕೆ
ಕರ್ನಾಟಕದೇಶಪ್ರಮುಖವಿದೇಶ

Musk’s AI statement raises fears ಎಐ ಎಫೆಕ್ಟ್‌ನಿಂದ 20 ವರ್ಷಗಳಲ್ಲಿ ಜನರಿಗೆ ಕೆಲಸವೇ ಇರಲ್ಲ: ಭಯ ಹೆಚ್ಚಿಸಿದ ಮಸ್ಕ್ ಹೇಳಿಕೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸಮಾಜದ ಎಲ್ಲಾ ಕ್ಷೇತ್ರಗಳನ್ನೂ ಕೃತಕ ಬುದ್ಧಿಮತ್ತೆ (AI) ಆವರಿಸಿಕೊಳ್ಳುತ್ತಿರುವಾಗಲೇ ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಮಾತನಾಡಿದ್ದು, ಭವಿಷ್ಯದಲ್ಲಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ “ಪೀಪಲ್ ಬೈ ಡಬ್ಲೂಟಿಎಫ್‌” ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಎಲಾನ್‌ ಮಸ್ಕ್‌, “ಮುಂದಿನ 20 ವರ್ಷಗಳಲ್ಲಿ ಜನರಿಗೆ ಕೆಲಸವು ಕೇವಲ ಆಯ್ಕೆಯಾಗಿ ಉಳಿಯಲಿದೆ. ಜನರು ಏಳು ದಿನಗಳ ತೀವ್ರ ನಿದ್ರೆ- ಎಚ್ಚರ- ಕೆಲಸ- ಪುನರಾವರ್ತನೆ ವೇಳಾಪಟ್ಟಿಯನ್ನು ಅನುಸರಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ತಂತ್ರಜ್ಞಾನವು ಭಾರೀ ಬದಲಾವಣೆಗಳನ್ನು ತರಲಿದ್ದು, ಮುಂದಿನ 20 ವರ್ಷಗಳಲ್ಲಿ ಜನರ ಕೆಲಸದ ಪರಿಕಲ್ಪನೆ ಸಂಪೂರ್ಣವಾಗಿ ಬದಲಾಗಲಿದೆ. ಕೆಲಸ ಮಾಡುವುದು ಸಂಪೂರ್ಣವಾಗಿ ಐಚ್ಛಿಕವಾಗಿರಲಿದ್ದು, ಒಂದು ಹವ್ಯಾಸವಾಗಿ ಪರಿವರ್ತನೆಗೊಳ್ಳಲಿದೆ ಎಂದು ಎಲಾನ್‌ ಮಸ್ಕ್‌ ಭವಿಷ್ಯ ನುಡಿದಿದ್ದಾರೆ.
ಎಐ ಮತ್ತು ರೊಬೊಟಿಕ್ಸ್‌ ತಂತ್ರಜ್ಞಾನದಲ್ಲಿ ಕಂಡುಬರುವ ಪ್ರಗತಿಗಳು, ನಮ್ಮನ್ನು ಕೆಲಸ ಮಾಡುವುದು ಐಚ್ಛಿಕ ಎಂಬ ಹಂತಕ್ಕೆ ತರುತ್ತವೆ. ಈ ಹಂತದಲ್ಲಿ ನೀವು ನಿಮ್ಮ ತೋಟದಲ್ಲಿ ನಿಮ್ಮ ಸ್ವಂತ ತರಕಾರಿಗಳನ್ನು ಬೆಳೆಸಬಹುದು ಅಥವಾ ನೀವು ಅಂಗಡಿಗೆ ಹೋಗಿ ತರಕಾರಿಗಳನ್ನು ಖರೀದಿಸಬಹುದು” ಎಂದು ಬಿಲಿಯನೇರ್‌ ಉದ್ಯಮಿ ತಮಾಷೆಯಾಗಿ ಹೇಳಿದ್ದಾರೆ.
ಗ್ರೋಕ್ ಎಂಬ ಚಾಟ್‌ಬಾಟ್ ಹೊಂದಿರುವ xAI ಕಂಪನಿ, ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿದೆ. ಇದರ ಆಧಾರದ ಮೇಲೆ ಮುಂದಿನ 20 ವರ್ಷಗಳಲ್ಲಿ ಎಐ ಮತ್ತು ರೋಬೊಟಿಕ್ಸ್‌ ತಂತ್ರಜ್ಞಾನ ನಮ್ಮನ್ನು ಹೇಗೆ ಆವರಿಸಿಕೊಳ್ಳಲಿದೆ ಎಂಬುದನ್ನು ನಾವು ಅಂದಾಜಿಸಬಹುದಾಗಿದೆ ಎಂದು ಮಸ್ಕ್‌ ಹೇಳಿದ್ದಾರೆ.

ಎಐ ಮತ್ತು ರೊಬೊಟಿಕ್ಸ್ ಮುಂದುವರೆದರೆ, ಕೆಲಸ ಮಾಡುವುದು ಐಚ್ಛಿಕವಾಗಿರುತ್ತದೆ ಮತ್ತು ಜನರಿಗೆ ಅವರು ಬಯಸುವ ಯಾವುದೇ ಸರಕು ಮತ್ತು ಸೇವೆಗಳು ಅತ್ಯಂತ ಸುಲಭವಾಗಿ ಸಿಗಲಿವೆ. ಭವಿಷ್ಯದಲ್ಲಿ AI ಮತ್ತು ರೊಬೊಟಿಕ್ಸ್ ಮನುಷ್ಯರನ್ನು ಸಂತೋಷಪಡಿಸಲು ಮಾಡಬೇಕಾದ ಎಲ್ಲಾ ಕೆಲಸಗಳನ್ನು ಮಾಡಲಿವೆ ಎಂದು ಟೆಸ್ಲಾ ಮುಖ್ಯಸ್ಥ‌ ಮಸ್ಕ್ ನುಡಿದರು.
ಒಂದು ನಿರ್ದಿಷ್ಟ ಹಂತದಲ್ಲಿ, ಎಐ ವಾಸ್ತವವಾಗಿ ಮಾನವರು ಯೋಚಿಸಬಹುದಾದ ಯಾವುದೇ ವಿಷಯದ ಬಗ್ಗೆ ಪರಿಹಾರವನ್ನು ನೀಡುವ ಸಾಮರ್ಥ್ಯ ಗಳಿಸಿರುತ್ತದೆ. ಆ ಸಮಯದಲ್ಲಿ, ಎಐ ಮತ್ತು ರೊಬೊಟಿಕ್ಸ್‌ಗಾಗಿ ಮನುಷ್ಯರು ಕೆಲಸ ಮಾಡುವ ಪರಿಸ್ಥಿತಿ ಉದ್ಭವವಾಗುತ್ತದೆ. ಮನುಷ್ಯರ ಕೆಲಸ ಮಾಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದಲ್ಲಿ ಭಾರೀ ಬದಲಾವಣೆ ಕಾಣಲಿದೆ ಎಂದು ಎಲಾನ್‌ ಮಸ್ಕ್‌ ಅಂದಾಜಿಸಿದ್ದಾರೆ.

ಎಐ ಮತ್ತು ರೋಬೋಟ್‌ಗಳು ಅಂತಿಮವಾಗಿ ಮನುಷ್ಯರಿಗೆ ಕೆಲಸವನ್ನು ಐಚ್ಛಿಕಗೊಳಿಸುತ್ತವೆ. ಹಣವು ಅಪ್ರಸ್ತುತವಾಗಲಿದ್ದು, ಬಡತನ ಅಸ್ತಿತ್ವದಲ್ಲಿರುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದರು.

ಎಐ ನಿರುದ್ಯೋಗ ಹೆಚ್ಚಳಕ್ಕೆ ಕಾರಣ ಆಗಲಿದೆ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿರುವ ನಡುವೆಯೇ, ಎಲಾನ್‌ ಮಸ್ಕ್‌ ಅವರು 20 ವರ್ಷಗಳಲ್ಲಿ ಕೆಲಸದ ಪರಿಕಲ್ಪನೆಯೇ ಬದಲಾಗಲಿದೆ ಎಂಬ ಹೇಳಿಕೆ ಹೆಚ್ಚು ಗಮನ ಸೆಳೆದಿದೆ.

https://x.com/cb_doge/status/1995173915879198986?t=Rg2TQWq_KxBgd4cR0C2h2A&s=19

TAGGED:People will have no jobs after 20 years due to AI effect: Musk's statement raises fears
Share This Article
Facebook Twitter Copy Link Print
Previous Article ರಾಜಕೀಯ ಪ್ರವೇಶ ಕುರಿತು ಮಾಧುರಿ ದೀಕ್ಷಿತ್ ಹೇಳಿದ್ದೇನು?
Next Article RBIನ ಹೊಸ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ‘ಉಷಾ ಜಾನಕಿರಾಮನ್’ ನೇಮಕ

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?