Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಮನ ಸೆಳೆಯುತ್ತಿದ್ದಾರೆ.ಬಿಗ್ ಬಾಸ್ ಫಿನಾಲೆವರೆಗೆ ಅವರು ಇರಬಹುದು ಎಂದು ಅನೇಕರು ನಿರೀಕ್ಷಿಸಿದ್ದಾರೆ. ಬಿಗ್ ಬಾಸ್ಗೆ ಬಂದ ಬಳಿಕ ಅವರು ಹೊರಗೆ ಮಾಡುತ್ತಿದ್ದ ಒಂದು ತಪ್ಪು ಅರಿವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ವಿಷಯದ ಬಗ್ಗೆ ಮಾತನಾಡುವಂತೆ ಕ್ಯಾಪ್ಟನ್ ರಘು ಕೋರಿದರು. ಈ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊರಹಾಕಿದರು. ಈ ಪೈಕಿ ರಕ್ಷಿತಾ ಅವರು ಪ್ರೀತಿ ವಿಚಾರದಲ್ಲಿ ಹೇಳಿದ ಮಾತು ಗಮನ ಸೆಳೆದಿದೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ.
ನನ್ನ ಮನೆಯಲ್ಲಿ ಇರುವಾಗ ಅಮ್ಮ ತಿಂಡಿ ಮಾಡಿಕೊಡ್ತಾ ಇದ್ದಳು. ನಾನು ಈ ತಿಂಡಿ ಬೇಡ, ಉಪ್ಪು ಆಗಿದೆ, ಖಾರ ಆಗಿದೆ ಎಂದೆಲ್ಲ ಹೇಳುತ್ತಿದ್ದೆ. ತಿನ್ನು ಎಂದು ಅವರು ಹೇಳಿದರೂ ನಾನು ತಿನ್ನುತ್ತಿರಲಿಲ್ಲ. ಆ ಟೈಮ್ ಅಲ್ಲಿ ಅದರ ವ್ಯಾಲ್ಯೂ, ಅವರು ತೋರಿಸುತ್ತಿದ್ದ ಪ್ರೀತಿ ಗೊತ್ತಾಗಲಿಲ್ಲ. ಈ ತಪ್ಪನ್ನು ನಾನು ಜೀವನದಲ್ಲಿ ಯಾವಾಗಲೂ ಮಾಡಲ್ಲ. ಮನೆಗೆ ಹೋದಾಗ ಏನೇ ಮಾಡಿದ್ರೂ ತಿನ್ನುತ್ತೇನೆ, ಕಂಪ್ಲೇಂಟ್ ಮಾಡಲ್ಲ’ ಎಂದಿದ್ದಾರೆ ರಕ್ಷಿತಾ.