newsics.com
ಐಎಎಸ್ ಗಂಡನನ್ನು ಬಿಟ್ಟು ತನ್ನೂರಿನ ಗ್ಯಾಂಗ್ಸ್ಟಾರ್ ಜೊತೆ ಓಡಿ ಹೋಗಿದ್ದ ಗುಜರಾತ್ನ ಐಎಎಸ್ ಅಧಿಕಾರಿಯೊಬ್ಬರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ನಿನ್ನೆ ಆಕೆ ಗುಜರಾತ್ನ ಗಾಂಧಿನಗರದಲ್ಲಿ ಐಎಎಸ್ ಅಧಿಕಾರಿಯ ಮನೆ ಮುಂದೆಯೇ ವಿಷ ಸೇವಿಸಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ.
ತನ್ನ ಊರಾದ ತಮಿಳುನಾಡಿನಲ್ಲಿ ಮಕ್ಕಳ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ, ಕ್ರಿಮಿನಲ್ ಜೊತೆ ಕೆಲ ತಿಂಗಳ ಹಿಂದೆ ಈಕೆ ಓಡಿ ಹೋಗಿದ್ದಳು. ಆದರೆ ನಿನ್ನೆ ಆಕೆ ಗುಜರಾತ್ನಲ್ಲಿ ವಿಷ ಸೇವಿಸಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು 45 ವರ್ಷಪ್ರಾಯದ ಸೂರ್ಯ ಜೆ ಎಂದು ಗುರುತಿಸಲಾಗಿದೆ.
ಪೊಲೀಸರು ಹೇಳುವ ಪ್ರಕಾರ ಗುಜರಾತ್ನ ಇಲೆಕ್ಟ್ರಸಿಟಿ ರೆಗ್ಯುಲೆಟರ್ ಕಮೀಷನ್ ಕಾರ್ಯದರ್ಶಿ ಆಗಿರುವ ಐಎಎಸ್ ಅಧಿಕಾರಿಯ ರಜನೀತ್ ಕುಮಾರ್ , ಗಾಂಧಿನಗರದ ಸೆಕ್ಟರ್ 19ರಲ್ಲಿ ಇರುವ ತನ್ನ ಮನೆಯತ್ತ ಬಂದ ಮಾಜಿ ಪತ್ನಿ ಸೂರ್ಯ ಜೆಯನ್ನು ಒಳಗೆ ಬಿಡದಂತೆ ಅಲ್ಲಿದ್ದ ತಮ್ಮ ಸಹಾಯಕರಿಗೆ ಹೇಳಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಆಕೆ ಮನೆ ಮುಂದೆಯೇ ವಿಷ ಸೇವಿಸಿದ್ದಾಳೆ.
ಪೊಲೀಸರು ಮೂಲಗಳ ಪ್ರಕಾರ, ಮಧುರೈನಲ್ಲಿ ನಡೆದ 14 ವರ್ಷದ ಬಾಲಕನ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈಕೆ ತನ್ನ ಗಂಡನ ಮನೆಗೆ ಆಗಮಿಸಿದ್ದಿರಬಹುದು ಎಂದು ಶಂಕಿಸಲಾಗಿದೆ.