newsics.com
ಧರ್ಮಸ್ಥಳ: ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಗ್ರಾಮದಲ್ಲಿ ಶವಗಳನ್ನು ಹೂತಿದ್ದಾಗಿ ಮಾಸ್ಕ್ ಮ್ಯಾನ್ ಹೇಳಿಕೆ ವಿಚಾರದ ನಂತ್ರ ರಾಜ್ಯ ಸರ್ಕಾರವು ಎಸ್ಐಟಿ ತನಿಖೆಗೆ ವಹಿಸಿ ಆದೇಶಿಸಿತ್ತು. ನಿನ್ನಯಿಂದ ಪಾಯಿಂಟ್ ನಂ.13ರಲ್ಲಿ ಅಸ್ಥಿ ಪಂಜರಗಳ ಶೋಧ ಕಾರ್ಯಕ್ಕಾಗಿ ಉತ್ಕನನ ನಡೆಸಲಾಗುತ್ತಿತ್ತು. ನಿನ್ನೆ ಸುಮಾರು 18 ಅಡಿ ಆಳವನ್ನು ತೆಗೆಯಲಾಗಿತ್ತು. ಆದರೇ ಯಾವುದೇ ಅಸ್ಥಿ ಪಂಜರ ದೊರೆತಿರಲಿಲ್ಲ. ಹೀಗಾಗಿ ಇಂದಿಗೆ ಶೋಧ ಕಾರ್ಯಾಚರಣೆ ಮುಂದೂಡಲಾಗಿತ್ತು.
ಎರಡು ದಿನಗಳಿಂದ ಎಸ್ ಐಟಿ ತಂಡ 13ನೇ ಪಾಯಿಂಟ್ ನಲ್ಲಿ ಉತ್ಖನನ ಮಾಡಿ ಅಸ್ಥಿಪಂಜರಗಳಿಗಾಗಿ ಶೋಧ ನಡೆಸಿದೆ. ಬರೋಬ್ಬರಿ 18 ಅಡಿ ಆಳ ಹಾಗೂ 32 ಅಡಿ ಉದ್ದ ಮಣ್ಣನ್ನು ಅಗೆಯಲಾಗಿದೆ. ಆದಾಗ್ಯೂ ಯಾವುದೇ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಗೆದಿರುವ ಸ್ಥಳದಲ್ಲಿ ಮತ್ತೆ ಮಣ್ಣು ಮುಚ್ಚಿವ ಕೆಲಸ ನಡೆದಿದೆ.
ದೂರುದಾರ ತೋರಿಸಿರುವ 6ನೇ ಪಾಯಿಂಟ್ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಈವರೆಗೂ ಅಸ್ಥಿಪಂಜರ ಅಥವಾ ಮೂಳೆಗಳು ಪತ್ತೆಯಾಗಿಲ್ಲ.