newsics.com
ಒಡಿಶಾ ವಿಜಿಲೆನ್ಸ್ ಇಲಾಖೆಯು ರ್ಜರಿ ಬೇಟೆಯಾಡಿದ್ದು, ಅರಣ್ಯ ಅಧಿಕಾರಿಯೊಬ್ಬರ ಅಕ್ರಮ ಆದಾಯವನ್ನು ಪತ್ತೆ ಹಚ್ಚಿದೆ.ಈ ವೇಳೆ ಪತ್ತೆಯಾದ ಹಣ ಮತ್ತು ಆದಾಯಕ್ಕಿಂತ ಮೀರಿ ಇರುವ ಆಸ್ತಿಯನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಡೆಪ್ಯುಟಿ ರೇಂಜರ್ ರಾಮ ಚಂದ್ರ ನೇಪಕ್ಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನೇಪಕ್ ಜೈಪುರ ವಲಯ ಅರಣ್ಯ ಅಧಿಕಾರಿ ಆಗಿದ್ದಾರೆ. ಈ ವೇಳೆ 4 ಚಿನ್ನದ ಬಿಸ್ಕಟ್ಗಳು, ಒಂದೊಂದು 10 ಗ್ರಾಮಂ ತೂಕ ಇರುವ 16 ಬಂಗಾರದ ನಾಣ್ಯಗಳು ಪತ್ತೆಯಾಗಿವೆ.
ಕೊರಾಪುಟ್ ಜಿಲ್ಲೆಯ ಜೇಪೋರ್ ಅರಣ್ಯ ವಿಭಾಗದ ಜೇಪೋರ್ ಅರಣ್ಯ ವಲಯದ ಉಪ ರೇಂಜರ್-ಕಮ್-ಇನ್ಚಾರ್ಜ್ ರೇಂಜರ್ ರಾಮಚಂದ್ರ ನೇಪಕ್ ಎಂಬಾತನ ಮೇಲೆ ದಾಳಿ ಮಾಡಲು ಹಿರಿಯ ಅಧಿಕಾರಿಗಳ ಹಲವು ತಂಡಗಳನ್ನು ನಿಯೋಜಿಸಲಾಗಿತ್ತು. ಜೈಪುರದ ಅಪಾರ್ಟ್ಮೆಂಟ್ನಲ್ಲಿರುವ ಆತನ ಫ್ಲಾಟ್ನಿಂದ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ದಾಳಿಯ ಸಮಯದಲ್ಲಿ ಕರೆನ್ಸಿ ಎಣಿಕೆ ಯಂತ್ರವನ್ನು ತರಬೇಕಾಗಿತ್ತು. ಅದೇ ಅಪಾರ್ಟ್ಮೆಂಟ್ನಲ್ಲಿರುವ ಆತನ ಒಡೆತನದ ಫ್ಲಾಟ್ ಮೇಲೂ ದಾಳಿಗಳು ನಡೆಯಿತು.
ಸದ್ಯದ ಮಾಹಿತಿ ಪ್ರಕಾರ, 1.5 ಕೋಟಿ ಹಣ ಸಿಕ್ಕಿದೆ. ಎರಡು ಕಾರಗಳು, ನಾಲ್ಕು ಬೈಕ್ ಕೂಡ ಸೀಜ್ ಮಾಡಿದ್ದಾರೆ.