newsics.com
ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಲು ಟೀಮ್ ಇಂಡಿಯಾ ಬೆಕೆನ್ಹ್ಯಾಮ್ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದೆ. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ವಿರೋಚಿತ ಸೋಲುಂಡ ಟೀಮ್ ಇಂಡಿಯಾ ಇದೀಗ ಮುಂದಿನ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನೆಕ್ಸ್ಟ್ ಟೆಸ್ಟ್ ಫೈಟ್ ನಡೆಯಲಿದ್ದು ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ.
ಮೂರನೇ ಟೆಸ್ಟ್ನಲ್ಲಿ ಕೇವಲ 22 ರನ್ಗಳಿಂದ ಸೋತ ಇಂಡಿಯಾ ಸೋಲನ್ನು ಅನುಭವಿಸಿದೆ.ಇದೀಗ ಗೆಲುವಿಗಾಗಿ ಹನುಮನ ಮೊರೆ ಹೋಗಿದ್ದಾರೆ.ಕೆಂಟ್ನಲ್ಲಿ ಟೀಮ್ ಇಂಡಿಯಾ ಅಭ್ಯಾಸಕ್ಕೆ ಬಂದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಮೀಟಿಂಗ್ ನಡೆದಿದೆ. ಆ ಬಳಿಕ ಅಭ್ಯಾಸದ ಕಣಕ್ಕೆ ಇಳಿಯೋಕೂ ಎಲ್ಲಾ ಆಟಗಾರರು ಹನುಮಾನ ಚಾಲೀಸಾವನ್ನ ಕೇಳಿದ್ದಾರೆ. ಆಂಜನೇಯನ ಆರಾಧನೆ ಮಾಡೋ ಮೂಲಕ 4ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧತೆ ಆರಂಭಿಸಿದೆ.
ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹನುಮನ ಪರಮಭಕ್ತರು. ಪಾಸಿಟಿವ್ ಎನರ್ಜಿಗಾಗಿ ಹನುಮಾನ್ ಚಾಲೀಸಾವನ್ನ ಹೆಚ್ಚು ಹೆಚ್ಚು ಕೇಳ್ತಾ ಇದ್ರು. ಇದೀಗ ಇದೇ ಹಾದಿಯಲ್ಲಿ ಯುವ ಆಟಗಾರರನ್ನೇ ಒಳಗೊಂಡ ಟೀಮ್ ಇಂಡಿಯಾ ಕೂಡ ಸಾಗ್ತಿದೆ.