newsics.com
ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನ ಬಳಿಕ ಇದೀಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಹುಲಿ ಮರಿಗಳು ಸಾವನ್ನಪ್ಪಿದೆ.
ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನವಿದೆ. ಇದೀಗ ಪದೇ ಪದೇ ಹುಲಿಗಳ ಸಾವಾಗುತ್ತಿರುವುದು ಕರ್ನಾಟಕದ ಹೆಗ್ಗಳಿಕೆಗೆ ತೀವ್ರ ಹಿನ್ನಡೆ ತಂದಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಹಾದಿಯ ಸಮೀಪ ಹಿಮ ಎಂಬ ಹೆಣ್ಣು ಹುಲಿಯ ಮೂರು ಹುಲಿ ಮರಿಗಳು ಮೃತಪಟ್ಟಿರುವುದು ಜು. 11ರಂದು ಬೆಳಕಿಗೆ ಬಂದಿದೆ. 7 ವರ್ಷದ ಹೆಣ್ಣು ಹುಲಿ ಹಿಮ ಇತ್ತೀಚೆಗೆ 2 ಗಂಡು ಹಾಗೂ 1 ಹೆಣ್ಣು ಮರಿಗೆ ಜನ್ಮ ನೀಡಿತ್ತು. ಹುಟ್ಟಿದ ಕೆಲವೇ ದಿನದಲ್ಲಿ ಮೂರು ಮರಿಗಳು ಮೃತಪಟ್ಟಿವೆ.
ಹಿರಿಯ ಅನುಭವಿ ತಜ್ಞ ವೈದ್ಯರ ಕೊರತೆ, ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಮರಿಗಳು ಮೃತಪಟ್ಟಿವೆ ಎಂಬ ಆರೋಪ ಕೇಳಿ ಬಂದಿವೆ. ಆದರೆ, ಈ ಆರೋಪವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ನಿರ್ವಾಹಕ ಅಕಾರಿ ವಿಶಾಲ್ ಸೂರ್ಯ ಸೇನ್ ನಿರಾಕರಿಸಿದ್ದಾರೆ. ‘‘ತಾಯಿ ಹುಲಿ ಮರಿಗಳಿಗೆ ಹಾಲುಣಿಸುತ್ತಿರಲಿಲ್ಲ. ಇದೇ ಕಾರಣದಿಂದ ಮೃತಪಟ್ಟಿರಬಹುದು’’ ಎಂದರು.
https://www.newsics.com/2025/07/11/kd-beauty-looks-glamorous-in-a-green-saree/