newsics.com
ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೂ ಹೃದಯಾಘಾತ ಸಂಬಂಧಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರೂ ಆಗಿರುವ ಸಂಸದ ಡಾ.ಸಿ.ಎನ್. ಮಂಜುನಾಥ್ ನಮ್ಮ ಹೃದಯ ಕಾಪಾಡಿಕೊಳ್ಳಲು ಯಾವತ್ತೂ ಹೇಳುವ ಈ ಟಿಪ್ಸ್ ತಪ್ಪದೇ ಪಾಲಿಸಿದರೆ ಹೃದಯಾಘಾತದಿಂದ ದೂರವಿರಬಹುದು.
ಹೃದ್ರೋಗ ತಜ್ಞರೆಂದರೆ ಮೊದಲು ನೆನಪಿಗೆ ಬರುವವರೇ ಡಾ.ಸಿ.ಎನ್. ಮಂಜುನಾಥ್. ಜಯದೇವ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಅವರು ಮಾಡಿರುವ ಸಾಧನೆಗಳೇ ಅಂತಹದ್ದು. ಇದೀಗ ಸಂಸದರಾಗಿದ್ದರೂ ವೈದ್ಯ ವೃತ್ತಿಯನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಜನರ ಆರೋಗ್ಯಸಂಬಂಧಿ ಆಕ ದೂರಮಾಡುವ ಕೆಲಸ ಮಾಡುತ್ತಿದ್ದಾರೆ.
ಈಗಲೂ ಅಷ್ಟೆ, ಹಾಸನ ಜಿಲ್ಲೆಯನ್ನು ಅತಿಯಾಗಿ ಕಾಡುತ್ತಿರುವ ಹೃದಯಾಘಾತ ಸಮಸ್ಯೆ ಹಿನ್ನೆಲೆಯಲ್ಲಿ ಡಾ.ಮಂಜುನಾಥ್ ಅವರು ಹೃದಯಾಘಾತ ಸಮಸ್ಯೆಯಿಂದ ದೂರ ಇರಲು ಜನರಿಗೆ ಅಮೂಲ್ಯ ಸಲಹೆ ನೀಡಿದ್ದಾರೆ.
– ರಕ್ತದೊತ್ತಡ ಬಾರದಂತೆ ನಮ್ಮ ಜೀವನ ಶೈಲಿಯಿರಬೇಕು. ರಕ್ತದೊತ್ತಡವೇ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಬಹುದು.
– ಮಧುಮೇಹವೂ ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಆಹಾರ ಶೈಲಿಯ ಮೇಲೂ ನಿಯಂತ್ರಣವಿರಬೇಕು.
– ಕೊಲೆಸ್ಟ್ರಾಲ್ ಇರುವ ಆಹಾರವನ್ನು ಸೇವಿಸಬಾರದು. ಇದರಿಂದ ಹೃದ್ರೋಗ ಬರುವ ಸಾಧ್ಯತೆ ಹೆಚ್ಚು. ಆಹಾರ ಶೈಲಿ ಆರೋಗ್ಯಯುತವಾಗಿರಬೇಕು.
– ಅತಿಯಾದ ಆಸೆ ಇರಬಾರದು. ಮನುಷ್ಯನಿಗೆ ಆಸೆ ಸಹಜ. ಆದರೆ ಅದು ಅತಿಯಾದರೆ ದೇಹಾರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
– ಮಾನಸಿಕ ಒತ್ತಡ, ಟೆನ್ಷನ್, ಇನ್ನೊಬ್ಬರ ಬಗ್ಗೆ ಕೆಡುಕು ಯೋಚನೆ ಬಿಡಬೇಕು. ಮಾನಸಿಕವಾಗಿ ಶಾಂತಿ, ನೆಮ್ಮದಿ, ಸಂತೋಷವಿದ್ದರೆ ಹೃದಯವೂ ಚೆನ್ನಾಗಿರುತ್ತದೆ.
– ಪ್ರತಿನಿತ್ಯ ವಾಕಿಂಗ್, ವ್ಯಾಯಾಮ ಮಾಡಬೇಕು. ವ್ಯಾಯಾಮ ಅತಿಯಾದರೂ ಕಷ್ಟ.
ನಮ್ಮ ದೇಹ ತಾಳಿಕೊಳ್ಳುವಷ್ಟು ದೈಹಿಕ ಕಸರತ್ತು, ವಾಕಿಂಗ್ ಹೃದಯವನ್ನೂ ಕಾಪಾಡುತ್ತದೆ.
ಇವಿಷ್ಟನ್ನು ಮಾಡಿದರೆ ನಮ್ಮ ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದು ಡಾ. ಸಿ.ಎನ್. ಮಂಜುನಾಥ್ ಅವರ ಅಭಿಪ್ರಾಯ.