newsics.com
ಕೇರಳ : ಕೇರಳದ ಕೊಟ್ಟಿಯೂರು ಶಿವನ ದೇವಾಲಯಕ್ಕೆ ನಟ ದರ್ಶನ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಪೂಜೆ ಸಲ್ಲಿಸಿದ್ರು. ನಟ ದರ್ಶನ್ ಜೊತೆ ನಟ ಧನ್ವೀರ್ ಕೂಡ ಭಾಗಿಯಾಗಿದ್ದರು.
ಕೇರಳದಲ್ಲಿರುವ ಕೊಟ್ಟಿಯೂರಿನ ಶಿವ ದೇವಾಲಯ. ಇಲ್ಲಿನ ಅಕ್ಕರೆ ಕೊಟ್ಟಿಯೂರು ಪ್ರಾಚೀನ ಶಿವ ದೇವಾಲಯವು ಹಿಂದೂ ಪುರಾಣಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಮತ್ತು ಅದರ ವಿಶಿಷ್ಟ ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳಿಗೆ ಹೆಸರುವಾಸಿಯಾಗಿದೆ. ವರ್ಷಗಳಲ್ಲಿ 30 ದಿನ ಮಾತ್ರ ತೆರೆಯುವ ಈ ದೇವಸ್ಥಾನ ಬಹಳ ಪ್ರಸಿದ್ದಿ ಪಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೂಲಕ ಬಿಡುಗಡೆಯಾದ ನಟ ದರ್ಶನ್ ಸದ್ಯ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
Sanjay Kapur: 1 ವಾರ ಕಳೆದರೂ ಅಂತ್ಯಕ್ರಿಯೆ ನಡೀಲಿಲ್ವಾ?; ಸಂಜಯ್ ಕಪೂರ್ ಪಾರ್ಥಿವ ಶರೀರ ಎಲ್ಲಿದೆ?