newsics.com
17 ವರ್ಷಗಳ ಕಪ್ ಕೊರಗು ನೀಗಿದ ಸಂಭ್ರಮವನ್ನ ಸೂತಕದ ಛಾಯೆ ಆವರಿಸಿದೆ. ಬೆಂಗಳೂರಿನಲ್ಲಿ ಲಾಯಲ್ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಮಾಡಿದ ಪ್ಲ್ಯಾನ್ ಸಾವುಗಳೊಂದಿಗೆ ಅಂತ್ಯಕಂಡಿದೆ.
ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಆರ್ಸಿಬಿ ಅಭಿಮಾನಿಗಳಂತ ಖುಷಿ ಹೇಳ ತೀರದು.
ನಿನ್ನೆ ಒಂದೇ ದಿನ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಮೆಟ್ರೋ ನಿಲ್ದಾಣದ ಒಳಗೆ ಹೋಗಲು ಜನ ನಾ ಮುಂದು ತಾ ಮುಂದು ಅಂತ ಸಿಕ್ಕ ಸಿಕ್ಕಂತೆ ಹಾರಿ ಹೋಗಿದ್ದಾರೆ. ಏಕಾಏಕಿ ಲಕ್ಷಾಂತರ ಪ್ರಯಾಣಿಕರನ್ನು ನಮ್ಮ ಮೆಟ್ರೋ ಸಿಬ್ಬಂದಿಯ ನಿಯಂತ್ರಣಕ್ಕೂ ಸಿಗಲಿಲ್ಲ.
ಅಲ್ಲದೇ ನಮ್ಮ ಮಟ್ರೋದಲ್ಲಿ ಪ್ರಯಾಣಿಕರು ಹೆಚ್ಚಾಗುತ್ತಿದ್ದಂತೆ. ಟಿಕೆಟ್ ಇಲ್ಲ, NCMC ಕಾರ್ಡ್ ಇಲ್ಲ, ಟೋಕನ್ ಇಲ್ಲ ಹೀಗೆ ಸಿಕ್ಕ ಸಿಕ್ಕಂತೆ ಜಂಪ್ ಮಾಡಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.instagram.com/reel/DKgFykVv69z/?igsh=MWU4bGdrNjQ5aGp1NQ==