newsics.com
ಬೆಂಗಳೂರು: ಆಟೋ, ಕ್ಯಾಬ್ ಬುಕ್ ಮಾಡಬೇಕು ಅಂದರೆ 10 ರಿಂದ 100 ರೂ. ವರೆಗೆ ಟಿಪ್ಸ್ ಕೊಡಬೇಕು, ಇಲ್ಲಾಂದರೆ ಆಟೋ, ಕ್ಯಾಬ್ ಬರುವುದಿಲ್ಲ ಎಂಬ ರೂಲ್ಸ್ ಮಾಡಿದ್ದು, ಅಗ್ರಿಗೇಟರ್ ಕಂಪನಿಗಳ ವಿರುದ್ಧ ಪ್ರಯಾಣಿಕರು ಕೆಂಡಕಾರುತ್ತಿದ್ದಾರೆ.
ಅರ್ಜೆಂಟಾಗಿ ಎಲ್ಲಿಗಾದರೂ ಹೋಗಬೇಕು ಅಂದಾಗಲೇ ಯಾವ ಆಟೋ, ಕ್ಯಾಬ್ಗಳು ಸಿಗಲ್ಲ. ಅದೆಷ್ಟೋ ಜನರಿಗೆ ಈ ಅನುಭವ ಆಗಿರುತ್ತೆ. ಹೀಗಿರುವಾಗ ಟಿಪ್ಸ್ ಅನ್ನೋ ಆಯಪ್ಷನ್ ನಿಮ್ಮ ಕಣ್ಣಿಗೆ ರಾಚುತ್ತದೆ. ಹತ್ತೋ ಇಪ್ಪತ್ತೋ ಟಿಪ್ಸ್ ಆಯಡ್ ಮಾಡಿದರೆ, ಥಟ್ ಅಂತ ಡ್ರೈವರ್ ಬರ್ತಾರೆ. ಹೀಗೆ ಜನರ ಅಸಹಾಕತೆಯನ್ನೇ ಈ ಆಯಪ್ಗಳು ಬಂಡಾವಳ ಮಾಡಿಕೊಳ್ಳುತ್ತಿವೆ.
ಗ್ರಾಹಕರಿಗೆ ಗೊತ್ತೇ ಆಗದ ಹಾಗೇ ಯಾಮಾರಿಸುತ್ತಾರೆ. ಈ ಬಗ್ಗೆ ಸ್ವತಃ ಆಟೋ ಚಾಲಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಓಲಾ, ಉಬರ್, ನಮ್ಮ ಯಾತ್ರಿ, ರ್ಯಾಪಿಡೋ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಟಿಪ್ಸ್ ಹೆಸರಲ್ಲಿ ವಸೂಲಿ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಅಗ್ರಿಗೇಟರ್ ಕಂಪನಿಗಳಿಗೆ ನೋಟಿಸ್ ನೀಡಿತ್ತು. ಆದರೆ ಈ ನೋಟಿಸ್ಗೆ ಅಗ್ರಿಗೇಟರ್ ಕಂಪನಿಗಳು ಕ್ಯಾರೆ ಎಂದಿಲ್ಲ.
Bengaluru PG: ನಷ್ಟಕ್ಕೆ ಸಿಲುಕಿದ ಪಿಜಿಗಳು; ಬೆಂಗಳೂರಿನಲ್ಲಿ 100 ಪಿಜಿ ಬಂದ್!