newsics.com
ತಿರುಮಲದ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ ವಿಮಾನ ಹಾರಾಟ ಕಂಡುಬಂದಿದ್ದು, ಕೂಡಲೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ವಲಯ ಎಂದು ಘೋಷಣೆ ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಈಗಾಗಲೇ ಶ್ರೀವಾರಿ ದೇವಸ್ಥಾನದ ಮೇಲೆ ಯಾವುದೇ ವಿಮಾನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಆಗಮ ನಿಯಮಗಳು ಹೇಳುತ್ತಿದ್ದರೂ, ಆಗಾಗ್ಗೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಹೆಚ್ಚಾಗಿ ಭಗವಂತನ ದೇವಸ್ಥಾನದ ಮೇಲೆ ಹಾರಾಟ ನಡೆಸುತ್ತಿವೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇಂದು ಮತ್ತೊಂದು ಪ್ರಯಾಣಿಕ ವಿಮಾನ ತಿರುಮಲ ದೇಗುಲದ ಮೇಲಿಂದ ಹಾರಾಟ ನಡೆಸಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು. ಇದರ ಬೆನ್ನಲ್ಲೇ ತಿರುಮಲವನ್ನು ವಿಮಾನ ಹಾರಾಟ ನಿಷೇಧಿತ ವಲಯವೆಂದು ಘೋಷಿಸಬೇಕೆಂಬ ಟಿಟಿಡಿ ಕೇಂದ್ರ ವಿಮಾನಯಾನ ಇಲಾಖೆಗೆ ಮತ್ತೆ ಮನವಿ ಮಾಡಿದೆ.
ಭಕ್ತರಿಂದಲೇ ವಿಡಿಯೋ ರೆಕಾರ್ಡ್
ಇನ್ನು ತಿರುಮಲ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ ವಿಮಾನ ಹಾರಾಟ ನಡೆಸಿದ್ದು, ಭಾನುವಾರ ಬೆಳಿಗ್ಗೆ, ಅತ್ಯಂತ ಕಡಿಮೆ ಎತ್ತರದಲ್ಲಿ ಭಗವಂತನ ದೇವಸ್ಥಾನದ ಮೇಲೆ ವಿಮಾನ ಹಾರಾಟ ನಡೆಸಿತು. ಕೆಲವು ಭಕ್ತರು ಅದನ್ನು ಗಮನಿಸಿ ತಮ್ಮ ಮೊಬೈಲ್ ಫೋನ್ಗಳಲ್ಲಿ ರೆಕಾರ್ಡ್ ಮಾಡಿಕೊಂಡರು. ಅಲ್ಲದೆ ಈ ಸಂಬಂಧ ಕೆಲವು ಭಕ್ತರು ಈ ಬಗ್ಗೆ ಟಿಟಿಡಿ ಜಾಗೃತ ಸಿಬ್ಬಂದಿಗೆ ದೂರು ನೀಡಿದ್ದಾರೆ. ದೇವಸ್ಥಾನದ ಮೇಲೆ ಹಾರಾಟ ನಡೆಸಿದ ವಿಮಾನ ಎಲ್ಲಿಂದ ಬಂತು ಮತ್ತು ಎಲ್ಲಿಗೆ ಹೋಯಿತು ಎಂದು ಟಿಟಿಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Robbery ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ದಂಪತಿಯಿಂದ ಕಳ್ಳತನ: ಚಿನ್ನದ ಜೊತೆ ಪಿಸ್ತೂಲೂ ಹೋಯ್ತು!