newsics.com
ಶ್ರೀನಗರ :ಪಾಕಿಸ್ತಾನದಿಂದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದೆ. ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ್ದು, ಈ ದಾಳಿಗಳಲ್ಲಿ ಸುಮಾರು 100 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 55 ಮಂದಿ ಗಾಯಗೊಂಡಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಘೋರ ದಾಳಿಗೆ ಪತ್ನಿ ಹಾಗೂ ಮಗನ ಎದುರಲ್ಲೇ ಮಂಜುನಾಥ್ ಜೀವಬಿಟ್ಟಿದ್ದರು. ಉಗ್ರರ ಪೈಶಾಚಿಕ ಕೃತ್ಯದಿಂದ ಪತಿಯ ಕೊನೆಯ ಕ್ಷಣವನ್ನು ಕಣ್ಣಾರೆ ಕಂಡಿದ್ದ ಮಂಜುನಾಥ್ ಪತ್ನಿ ಪಲ್ಲವಿ, ವಿವರಿಸಿದ್ದರು. ಪತಿಯ ಹಣೆಗೆ ಉಗ್ರರು ಗುಂಡಿಟ್ಟಾಗ, ನನ್ನ ಮತ್ತು ಮಗನನ್ನ ಯಾಕೆ ಉಳಿಸಿದ್ದೀರಿ..? ‘ನಮ್ಮನ್ನೂ ಮುಗಿಸಿ..’ಎಂದು ಭಯೋತ್ಪಾದಕರಿಗೆ ಕೇಳಿಕೊಂಡೆ. ಅದಕ್ಕೆ ಉಗ್ರ, ‘ಅದನ್ನು ಮೋದಿಗೆ ಹೋಗಿ ಹೇಳು’ ಎಂದ ಅಂತಾ ತಿಳಿಸಿದ್ದರು.
ಮೋದಿಗೆ ಹೇಳು ಎಂದಿದ್ದ ಉಗ್ರನಿಗೆ ಭಾರತದ ಸೇನೆ ಆಪರೇಷನ್ ಸಿಂಧೂರ ಮೂಲಕ ಉತ್ತರ ಕೊಟ್ಟಿದೆ. ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ. ಸಿಂಧೂರ ಅಳಿಸಿದ ಉಗ್ರರು ಮತ್ತು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯೇ ಈ ‘ಆಪರೇಷನ್ ಸಿಂಧೂರ್’ ಆಗಿದೆ.