newsics.com
ನವದೆಹಲಿ: ವ್ಯಕ್ತಿಯೊಬ್ಬ ತನ್ನ ಥಾರ್ ಎಸ್ ಯುವಿಯನ್ನು ಸೆಕ್ಯುರಿಟಿ ಗಾರ್ಡ್ ಮೇಲೆ ಚಲಾಯಿಸಿ ಅಟ್ಟಹಾಸ ಮರೆದಿರುವ ಘಟನೆ ದೆಹಲಿಯ ಮಹಿಪ್ಲಾಪುರದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕುಮಾರ್ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಪಾಲ್ಪುರ್ ಚೌಕ್ನಲ್ಲಿ ಕ್ಯಾಬ್ ಅವರನ್ನು ಇಳಿಸಿದಾಗ ಹಿಂದಿನಿಂದ ಬಂದ ಎಸ್ಯುವಿ ಜೋರಾಗಿ ಹಾರ್ನ್ ಮಾಡಲು ಪ್ರಾರಂಭಿಸಿತು.
ಹಾರ್ನ್ ಮಾಡಬೇಡಿ ಎಂದು ಚಾಲಕನಿಗೆ ಹೇಳಿದ ನಂತರ ಭದ್ರತಾ ಸಿಬ್ಬಂದಿಗೆ ಥಾರ್ ಎಸ್ ಯುವಿ ಡಿಕ್ಕಿ ಹೊಡೆದ ಘಟನೆ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ .