newsics.com
ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಷ್ಟೋ ಮದುವೆಗಳು ರದ್ದಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತವೆ. ಮದುವೆ ಇಷ್ಟ ಇಲ್ಲದೇ ವಧು ಅಥವಾ ವರ ಪರಾರಿಯಾದ ಪ್ರಕರಣಗಳ ಬಗ್ಗೆ ಒಂದಷ್ಟು ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಅದರಲ್ಲಿಯೂ ಮನೆಯವರ ಬಲವಂತಕ್ಕೆ ಮದುವೆಗೆ ಒಪ್ಪಿ ಕೊನೆ ಕ್ಷಣದಲ್ಲಿ ಮದುವೆ ಮಂಟಪದಿಂದ ಎಸ್ಕೇಪ್ ಆಗುವ ಪ್ರಕರಣ ಗಳು ನಡೆಯುತ್ತಿರುತ್ತದೆ. ಬೇರೆ ಬೇರೆ ಕಾರಣಗಳಿಗೆ ಮದುವೆ ರದ್ದು ಆಗಿವೆ. ಇಲ್ಲೊಬ್ಬ ತಾಳಿ ಕಟ್ಟೋಕೆ ಕೆಲವೇ ನಿಮಿಷಗಳಿರುವ ವೇಳೆ ಮದುವೆ ಬೇಡ ಎಂದು ಹೇಳಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಬಾಲೇಪುರ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಆರತಕ್ಷತೆಯಲ್ಲಿ ನಗು-ನಗುತ್ತಾ ನಿಂತಿದ್ದ ಜೋಡಿ. ತಾಳಿ ಕಟ್ಟಿಸಿಕೊಳ್ಳಲು ವಧು ಇನ್ನೇನು ಕೊರಳು ಕೊಡ್ಬೇಕು ಎನ್ನುವಷ್ಟರಲ್ಲಿ ಹುಡುಗ ಕ್ಯಾತೆ ತೆಗೆದಿದ್ದಾನೆ. ಮಂಟಪದಲ್ಲಿ ಕೂತಿದ್ದವನು ಹಾರವನ್ನೇ ಬಿಸಾಡಿ, ತಾಳಿ ಕಟ್ಟದೆ ಮದುವೆ ಹಾಲ್ನಿಂದ ಹೊರಗೆ ಹೋಗಿದ್ದಾನೆ.
ಮದುವೆಗೆ ಮುಂಚೆಯೇ ತಾನು ಬೇರೊಬ್ಬರು ಪ್ರೀತಿ ಮಾಡ್ತಿದ್ದೆ ಎನ್ನುವ ವಿಚಾರವನ್ನು ಯುವತಿ, ವೇಣು ಜೊತೆ ಹೇಳಿಕೊಂಡಿದ್ದಳು. ಆಗ ಆತ ಇದೆಲ್ಲವೂ ಮುಗಿದು ಹೋದ ಅಧ್ಯಾಯ ಎಂದು ಹೇಳಿ, ಮದುವೆಗೆ ಓಕೆ ಎಂದಿದ್ದನಂತೆ. ಇದೀಗ ಯುವತಿ ಮೇಲೆ ನನಗೆ ಅನುಮಾನವಿದೆ ಎಂದು ಆತ ಹೇಳಿ ಕಿರಿಕ್ ತೆಗೆದಿದ್ದಾನೆ. ಈ ಹುಡುಗಿ ಜೊತೆ ಮದುವೆನೇ ಬೇಡ ಎಂದು ಹೈಡ್ರಾಮ ಮಾಡಿದ್ದಾನೆ. ಮದುವೆ ಮಂಟಪದಿಂದಲೇ ಹೊರಟು ಹೋಗಿದ್ದಾನೆ.