newsics.com
ಮ್ಯಾನ್ಮಾರ್ : ಮ್ಯಾನ್ಮಾರ್ನಲ್ಲಿ ನೆಡೆದ ಪ್ರಬಲ ಭೂಕಂಪದಿಂದ ಮ್ಯಾನ್ಮಾರ್ ನ ಜನಜೀವನವೇ ಅಸ್ತವ್ಯಸ್ತವಾಗಿದೆ. ಹಲವಾರು ಕಟ್ಟಡಗಳು ನೆಲಸಮಾವಾಗಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕನಿಷ್ಠ 2056 ಮಂದಿ ಸಾವನ್ನಪ್ಪಿದ್ದು 3900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಲ್ಲದೆ ಸುಮಾರು 270 ಮಂದಿ ಕಾಣೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ವರದಿಗಳಿವೆ.
ಸತತ ನಾಲ್ಕು ದಿನಗಳಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರೂ, ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಇನ್ನು ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಒಂದು ವಾರ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದ್ದು, ಜೀವಹಾನಿ ಮತ್ತು ಹಾನಿಗೆ ಸಂತಾಪ ಸೂಚಿಸಿ ಏಪ್ರಿಲ್ 6ರವರೆಗೆ ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಇಳಿಸಲಾಗುತ್ತದೆ ಎಂದು ಆಡಳಿತಾರೂಢ ಜುಂಟಾ ಹೇಳಿಕೆಯಲ್ಲಿ ತಿಳಿಸಿದೆ.
ಇಡೀ ಜಗತ್ತು ಮ್ಯಾನ್ಮಾರ್ಗೆ ಸಹಾಯಹಸ್ತ ಚಾಚಿದೆ. ಇವುಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಅದು ನೆರೆಯ ದೇಶದ ವಿರುದ್ಧ ನೇರವಾಗಿ ಆಪರೇಷನ್ ಬ್ರಹ್ಮ ಎಂಬ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸುಮಾರು 35 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂಬ ಅಂಶದಿಂದ ಭೂಕಂಪದ ಪ್ರಮಾಣವನ್ನು ಅಂದಾಜಿಸಬಹುದು.
https://www.newsics.com/2025/03/31/a-drunken-fight-between-friends-ends-in-murder/