newsics.com
ಬೆಂಗಳೂರು: ಹನಿಟ್ರ್ಯಾಪ್ ಕೇಸ್ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಸಂಬಂಧಿಸಿದಂತೆ ವಿನಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಸಚಿವ ಎನ್ ರಾಜಣ್ಣ ಅವರು ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ಹನಿಟ್ರ್ಯಾಪ್ ಪ್ರಕರಣದ ಅರ್ಜಿಯನ್ನು ಸುಪ್ರೀ ಕೋರ್ಟ್ ವಜಾಗೊಳಿಸಿದೆ. ಇದನ್ನು ತನಿಖೆ ಮಾಡಿಸಬೇಕೆಂದು ಜಾರ್ಖಂಡ್ ನವರೊಬ್ಬರು ಅರ್ಜಿ ಸಲ್ಲಿಸಿದ್ದರು. ನೀವು ಜಾರ್ಖಂಜ್ ನವರು ವಿಚಾರ ಕರ್ನಾಟಕದ್ದು. ನಿಮಗ್ಯಾಕೆ ಅದರ ಉಸಾಬರಿ ಎಂದಿರುವುದಲ್ಲದೆ, ಇದೊಂದು (ರಾಜಣ್ಣ ಅವರದ್ದು) ರಾಜಕೀಯ ಹೇಳಿಕೆ. ಆ ಬಗ್ಗೆ ದೂರು ಎಲ್ಲೂ ದಾಖಲಾಗಿಲ್ಲ. ಹಾಗಾಗಿ, ಇದರ ರಾಜಕಾರಣದ ನಾನ್ ಸೆನ್ಸ್ ಗಳನ್ನು ನಾವು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದೆ. ಈ ಮೂಲಕ ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿದ್ದಾರೆ. ದೂರದಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Saugat-e-Modi 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ʼಸೌಗಾತ್-ಎ-ಮೋದಿʼ ಕಿಟ್: ಏನೆಲ್ಲಾ ಇದೆ?