newsics.com
ಬೆಳಗಾವಿ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿ ಮಹಾರಾಷ್ಟ್ರದ ಕೆಲವು ಮರಾಠಿ ಪುಂಡರು ಹಾಗೂ ಎಂಇಎಸ್ ಕಾರ್ಯಕರ್ತರು ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ‘ಕರ್ನಾಟಕ ಬಂದ್’ಗೆ ಕರೆ ನೀಡಲಾಗಿದೆ. ಈ ಬಂದ್ ಮಧ್ಯೆಯೇ ಎಂಇಎಸ್ ಪುಂಡರು ಮತ್ತೆ ತಮ್ಮ ಹಳೆಯ ಛಾಳಿ ಮುಂದುವರೆಸಿದ್ದಾರೆ.
ಇತ್ತೀಚೆಗೆ ಪಿಡಿಒ ಮೇಲೆ ದರ್ಪ ತೋರಿದ್ದ ಮಾರಾಠಿ ಪುಂಡನಿಗೆ ಸನ್ಮಾನ ಮಾಡುವ ಮೂಲಕ ಕನ್ನಡಿಗರನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದಾರೆ.
ಇತ್ತೀಚೆಗೆ ಗಡಿಭಾಗದ ಕರ್ನಾಟಕದ ಪಿಡಿಓಗೆ ದರ್ಪ ಮರಾಠಿ ಪುಂಡನೊಬ್ಬ ದರ್ಪ ತೋರಿದ್ದನು. ಆ ಪುಡಾರಿಗೆ ಇಂದು ಎಂಇಎಸ್ನಿಂದ ಸನ್ಮಾನ ಮಾಡಲಾಗಿದೆ. ಮತ್ತೊಂದೆಡೆ ಕರ್ನಾಟಕದಾದ್ಯಂತ ಎಂಇಎಸ್ ನಿಷೇಧಿಸುವಂತೆ ಬಂದ್ ಗೆ ಕರೆ ನೀಡಲಾಗಿದೆ. ಈ ಮಧ್ಯೆ ಎಂಇಎಸ್ ಪುಂಡರು ಕಿಡಿಗೇಡಿ ಕೃತ್ಯ ಎಸಗಿದ್ದಾರೆ.
ಪಿಡಿಒ ಮೇಲೆ ದರ್ಪ ತೋರಿದ್ದ ಕಿಣಯೇ ಗ್ರಾಮದ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡ ಶುಭಂ ಶಳ್ಕೆ ಎನ್ನುವ ಎಂಇಎಸ್ ಪುಂಡರ ಗ್ಯಾಂಗ್ ಸನ್ಮಾನ ಮಾಡಿದೆ. ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಎಂಇಎಸ್ ಮುಖಂಡ ಶುಭಂ ಶಳ್ಕೆ ಹಾರ ಹಾಕಿ ಸ್ಮಾನ ಮಾಡಿದ್ದಾನೆ.
ತಿಪ್ಪಣ್ಣ ಡೋಕ್ರೆ ಇತ್ತೀಚೆಗೆ ಕಿಣಯೇ ಗ್ರಾಮ ಪಂಚಾಯಿತಿಗೆ ಹೋಗಿ ಅಲ್ಲಿದ್ದ ಪಿಡಿಒ ನಾಗೇಂದ್ರ ಪತ್ತಾರ ಅವರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ಕೊಡಬೇಕು ಎಂದು ಕೇಳಿದ್ದಾನೆ. ಅಷ್ಟೇ ಅಲ್ಲದೇ ಮರಾಠಿಯಲ್ಲೇ ಮಾತನಾಡಬೇಕೆಂದು ದರ್ಪ ತೋರಿದ್ದಾನೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿತ್ತು.