newsics.com
ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಕಿರುಕುಳದಿಂದಾಗಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಹಲವು ಸಂಘ-ಸಂಸ್ಥೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ಇಂದು ರಾಜ್ಯಾದ್ಯಂತ ಬೆಳಗಿನ ಶೋಗಳು ಬಂದ್ ಇರಲಿವೆ. ಬೆಳಿಗ್ಗೆ ಶೋ ಪ್ರದರ್ಶಿಸದಂತೆ ವಾಣಿಜ್ಯ ಮಂಡಳಿ ಕಡೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಸದ್ಯ ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ಓಪನ್ ಇದೆ. ಆದರೆ, ಬಂದ್ ಬಿಸಿ ಹೆಚ್ಚಿದರೆ ನಂತರ ಶೋ ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಮಧ್ಯಾಹ್ನದ ಬಳಿಕ ಯಥಾ ಪ್ರಕಾರ ಶೋಗಳು ಪ್ರಸಾರ ಕಾಣಲಿವೆ. ಹೀಗಾಗಿ ಸಿನಿಮಾ ನೋಡುವ ಪ್ಲ್ಯಾನ್ ಇದ್ದರೆ ಮಧ್ಯಾಹ್ನದ ಬಳಿಕ ಯೋಜಿಸುವುದು ಉತ್ತಮ.
ಇದರ ಜೊತೆಗೆ ಫಿಲ್ಮ್ ಚೇಂಬರ್ನ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು ಸೇರಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವರು ಹೋರಾಟದಲ್ಲಿ ಭಾಗಿ ಆಗಲಿದ್ದಾರೆ. ಟೌನ್ಹಾಲ್ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಯಲಿದೆ. ಇದರಲ್ಲಿ ಇವರು ಭಾಗಿ ಆಗಲಿದ್ದು, ಮರಾಠಿ ಪುಂಡರ ವಿರುದ್ಧ ಹೋರಾಟದ ಮೆರವಣಿಗೆ ನಡೆಯಲಿದೆ.