newsics.com
ನವದೆಹಲಿ: ಫೆಬ್ರವರಿ 14, ಭಾರತೀಯರ ಪಾಲಿಗೆ ಮರೆಯಲಾಗದ ದಿನ, ಕರಾಳ ದಿನ ಎಂದೇ ಹೇಳಬಹುದು. ಬರೊಬ್ಬರಿ ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್ಪಿಎಫ್ ಅಧಿಕಾರಿಗಳು ಹುತಾತ್ಮರಾಗಿದ್ದರು. ಈ ಸುದ್ದಿ ಕೇಳಿ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು.
ಹೌದು, 2019ರ ಫೆಬ್ರವರಿ 14ರಂದು ಸಂಜೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಿಂದ ಸಿಡಿಲಬ್ಬರದ ಸುದ್ದಿಯೊಂದು ದೇಶವಾಸಿಗಳ ಕಿವಿಗಪ್ಪಳಿಸಿತು. ಅದು ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರನ್ನು ಪ್ರಾಣತೆತ್ತಿದ್ದರು. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನ 20 ವರ್ಷದ ಆತ್ಮಹತ್ಯಾ ಬಾಂಬರ್ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಗೆ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು 40 ಯೋಧರನ್ನು ಹತ್ಯೆಗೈದಿದ್ದನು.
ವರದಿಗಳ ಪ್ರಕಾರ, ವಾಹನವನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳ ಬೆಂಗಾವಲು ಪಡೆಯಲ್ಲಿ 70 ಕ್ಕೂ ಹೆಚ್ಚು ವಾಹನಗಳು ಇದ್ದವು. ಈ ವಾಹನವನ್ನು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಓಡಿಸುತ್ತಿದ್ದರು, ನಂತರ ಅವರನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಯಿತು, ಈ ವಾಹನವು ಸುಮಾರು 80 ಕಿಲೋಗ್ರಾಂಗಳಷ್ಟು ಆರ್ಡಿಎಕ್ಸ್ ಸ್ಫೋಟಕವನ್ನು ಹೊಂದಿತ್ತು, ಇದನ್ನು ಈ ಆತ್ಮಾಹುತಿ ದಾಳಿಯಲ್ಲಿ ಬಳಸಲಾಯಿತು. ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಈ ಘಟನೆ ನಡೆದಾಗ ಬೆಂಗಾವಲು ಪಡೆಯಲ್ಲಿ 2,500ಕ್ಕೂ ಹೆಚ್ಚು ಸಿಆರ್ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ.
ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಯ ಕೆಲವು ದಿನಗಳ ನಂತರ, ಫೆಬ್ರವರಿ 26, 2019ರಂದು ಭಾರತೀಯ ವಾಯುಪಡೆಯ ಹಲವಾರು ಜೆಟ್ಗಳು ಬಾಲಾಕೋಟ್ನಲ್ಲಿರುವ ಜೈಶ್ನ ಭಯೋತ್ಪಾದಕ ಶಿಬಿರಗಳ ಮೆಲೆ ಬಾಂಬ್ ದಾಳಿ ಮಾಡಿ ಸುಮಾರು 500 ಭಯೋತ್ಪಾದಕರನ್ನು ಹೊಡೆದುರುಳಿಸಿದರು.
ಬಾಲಾಕೋಟ್ನಲ್ಲಿ ನಡೆದ ವೈಮಾನಿಕ ದಾಳಿಯ ನಂತರ, ಪಾಕಿಸ್ತಾನದ ವಾಯುಪಡೆಯು ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಲು ಪ್ರಯತ್ನಿಸಿತು. ಈ ಪ್ರಯತ್ನವನ್ನು ಐಎಎಫ್ ವಿಫಲಗೊಳಿಸಿತು.
ಫೆಬ್ರವರಿ 14, 2019ರ ಪುಲ್ವಾಮ ದಾಳಿಯು ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ದುರಂತ ಘಟನೆಯಾಗಿದೆ. ನಾವು ಪುಲ್ವಾಮ ದಾಳಿಯನ್ನು ಎದುರಿಸಿ 5 ವರ್ಷಗಳು ಕಳೆದಿವೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಸಿಆರ್ಪಿಎಫ್ ಯೋಧರ ನೆನಪಿಗಾಗಿ ಈ ಫೆಬ್ರವರಿ 14ನ್ನು ಬ್ಲಾಕ್ ದಿನವಾಗಿ ಆಚರಿಸಲಾಗುತ್ತಿದೆ.
ಇತ್ತ ದಾಳಿ ನಡೆದು 6 ವರ್ಷಗಳು ಕಳೆದರೂ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸೇರಿದಂತೆ ಪ್ರಮುಖ ಸಂಚುಕೋರರು ಇಲ್ಲಿಯವರೆಗೂ ಸಿಕ್ಕಿಲ್ಲ. ಈ ದುಷ್ಕೃತ್ಯ ವೆಸಗಿದ ಪಾಪಿಗಳನ್ನು ನಮ್ಮ ವಶಕ್ಕೆ ಒಪ್ಪಿಸಿ ಎಂದು ಭಾರತ ಬರೆದಿದ್ದರೂ, ಪಾಕಿಸ್ತಾನ ಮಾತ್ರ ಯಾವ ಪತ್ರಗಳಿಗೆ ಉತ್ತರಿಸುವ ಗೋಜಿಗೂ ಹೋಗಿಗಿಲ್ಲ. ಈ ದಾಳಿಯಲ್ಲಿ ಭಾಗಿಯಾದ 19 ಉಗ್ರರ ಪೈಕಿ 15 ಮಂದಿಯನ್ನು ವಿವಿಧ ಕಾರ್ತಾಚರಣೆಗಳ ಸಂದರ್ಭದಲ್ಲಿ ಬಂಧಿಸಲಾಗಿದೆ, ಇಲ್ಲವೇ ಹತ್ಯೆ ಮಾಡಲಾಗಿದೆ. ಅಜರ್, ಆತನ ಸಹೋದರ ರಾವುಫ್ ಅಸ್ಗರ್ ಮತ್ತು ಅವನ ಸಂಬಂಧಿ ಅಮ್ಮರ್ ಆಲ್ವಿ ತಲೆಮರೆಸಿಕೊಂಡಿದ್ದಾರೆ.