newsics.com
ಉತ್ತರಾಖಂಡ: ಉತ್ತರಾಖಂಡ ಮಾಜಿ ಸಿಎಂ ರಮೇಶ್ ಪೊಖ್ರಿಯಾಲ್ ಮಗಳು ಖತರ್ನಾಕ್ ಜೋಡಿಯನ್ನ ನಂಬಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾಳೆ.
ಉತ್ತರಾಖಂಡ ಮಾಜಿ ಸಿಎಂ ಮಗಳು ಅರುಷಿ ನಿಶಾಂಕ್ ಅವರನ್ನ ಹೀರೋಯಿನ್ ಮಾಡ್ತೀವಿ ಅಂತ ನಂಬಿಸಿ ಪಂಗನಾಮ ಹಾಕಲಾಗಿದೆ. ಮುಂಬೈನ ವರುಣ್ ಬಾಗ್ಲಾ, ಮಾನ್ಸಿ ಬಾಗ್ಲಾ ಎಂಬುವವರು 4 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಹಣ ವಾಪಸ್ ಕೇಳಿದಕ್ಕೆ ಖತರ್ನಾಕ್ ಜೋಡಿ ಕೊಲೆ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾರೆ.
ಅರುಷಿ ನಿಶಾಂಕ್ಗೆ ಮುಂಬೈನ ಮಾನ್ಸಿ, ವರುಣ್ ಬಾಗ್ಲಾ ಎಂಬುವವರು ನಿರ್ಮಾಪಕರು ಎಂದು ಪರಿಚಯವಾಗಿದ್ದಾರೆ. ಆರುಷಿ ನಿವಾಸಕ್ಕೆ ಬಂದಿರುವ ಈ ದಂಪತಿ ‘ಅಂಯೋಂ ಕಿ ಗುಸ್ತಾಖಿಯಾನ್’ ಚಿತ್ರದಲ್ಲಿ ಅಭಿನಯಿಸೋ ಆಫರ್ ಕೊಟ್ಟಿದ್ದಾರೆ.
ಸಿನಿಮಾ ಮಾಡಲು ₹5 ಕೋಟಿ ಹಣ ಕೇಳಿ ಬಡ್ಡಿ ಸಮೇತ ₹15 ಕೋಟಿ ನೀಡೋದಾಗಿ ಭರವಸೆ ಕೊಟ್ಟಿದ್ದಾರೆ. ಮುಂಬೈ ದಂಪತಿಯ ಮಾತು ನಂಬಿ ಮಾಜಿ ಸಿಎಂ ಮಗಳು 4 ಕಂತುಗಳಲ್ಲಿ ₹4 ಕೋಟಿ ಹಣ ಕೊಟ್ಟಿದ್ದಾರೆ.
ಕಳೆದ ಫೆಬ್ರವರಿ 5ರಂದು ಅರುಷಿ ನಿಶಾಂಕ್ಗೆ ವರುಣ್ ಬಾಗ್ಲಾರಿಂದ ಒಂದು ಸಂದೇಶ ಬಂದಿದೆ. ನಿಮಗೆ ನೀಡಲಾದ ನಾಯಕಿ ಪಾತ್ರವನ್ನ ಬೇರೆಯವರಿಗೆ ನೀಡಲಾಗುವುದು. ಎಂದು ಅದರಲ್ಲಿ ಬರೆದಿದೆ.
ಸಿನಿಮಾದಲ್ಲಿ ಚಾನ್ಸ್ ಕೊಡದ ಹಿನ್ನೆಲೆಯಲ್ಲಿ ಅರುಷಿ ನಿಶಾಂಕ್ ಅವರು ಹಣ ವಾಪಸ್ ಕೇಳಿದ್ದಾರೆ. ಹಣ ವಾಪಸ್ ಕೇಳಿದ ಮೇಲೆ ಕಿಲಾಡಿ ದಂಪತಿಯ ಅಸಲಿಯತ್ತು ಬಯಲಾಗಿದೆ. ಕೊಲೆ ಬೆದರಿಕೆ ಹಾಕಿರುವ ದಂಪತಿ ವಿರುದ್ಧ ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ಅರುಷಿ ನಿಶಾಂಕ್ ಅವರು ವರುಣ್ ಬಾಗ್ಲಾ, ಮಾನ್ಸಿ ವಿರುದ್ಧ FIR ದಾಖಲಿಸಿದ್ದಾರೆ. ಈ ಪ್ರಕರಣ ದಾಖಲಾಗ್ತಿದ್ದಂತೆ ಖತರ್ನಾಕ್ ಬಾಗ್ಲಾ ಜೋಡಿ ಈಗ ಎಸ್ಕೇಪ್ ಆಗಿದ್ದಾರೆ.