newsics.com
ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಪಟ್ಟಕ್ಕಾಗಿ ನಿಜವಾದ ಕದನ ಆರಂಭವಾಗಿದೆ. ಯತ್ನಾಳ್ ನೇತೃತ್ವದ ರೆಬೆಲ್ಸ್ ನಾಯಕರು ದಿಲ್ಲಿ ಪರೇಡ್ ಮುಂದುವರಿಸಿದ್ದಾರೆ. ದಿಲ್ಲಿಯಲ್ಲಿ ಹಲವು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ.
ಎಂದಿನಂತೆ ಯತ್ನಾಳ್ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ವಿಜಯೇಂದ್ರ ಬಳಿ ಆಪಾರ ಹಣ ಇದೆ. ಹಣದ ಮದದಿಂದ ಯಾರನ್ನು ಬೇಕಾದರೂ ಖರೀದಿಸಬಲ್ಲೆ ಎಂಬ ಅಹಂಕಾರ ಮನೆ ಮಾಡಿದೆ ಎಂದು ವಾಗ್ದಾಳಿ
ನಡೆಸಿದ್ದಾರೆ.
ವಿಜಯೇಂದ್ರ ಬಳಿ ಯಾವುದೇ ಒಳ್ಳೆಯ ಗುಣಗಳಿಲ್ಲ. ಬಿಜೆಪಿಗೆ ವಿಜಯೇಂದ್ರ ಕುತ್ತು ತಂದಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಬಿಎಸ್ವೈ ಕುಟುಂಬ ಬಿಜೆಪಿಯಲ್ಲಿ ಇತರ ಎಲ್ಲ ನಾಯಕರನ್ನು
ಹತ್ತಿಕ್ಕುವ ಯತ್ನ ಮಾಡುತ್ತಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ ಭ್ರಷ್ಟ ಪರಿವಾರವಾದ ಕೊನೆಗೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನೊಂದೆಡೆ ವಿಜಯೇಂದ್ರ ಬಣದ ಬ್ಯಾಂಟಿಂಗ್ ಅಬ್ಬರ ಜೋರಾಗಿದೆ. ವಿಜಯೇಂದ್ರ ಪರ ಆಸ್ಥಾನ ಕಲಾವಿದ ರೇಣುಕಾಚಾರ್ಯ ಎಂದಿನಂತೆ ಗುಡುಗಿದ್ದಾರೆ. ಯತ್ನಾಳ್ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದಾರೆ. ನಾಲಿಗೆ ಬಿಗಿ ಹಿಡಿದು ಮಾತನಾಡುವಂತೆಯೂ ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ಈ ಹಿಂದೆ ಬಿಜೆಪಿ ಬಿಟ್ಟು ಹೋಗಿದ್ದರು. ಪಕ್ಷಾಂತರಿಗಳ ಪಕ್ಷ ನಿಷ್ಠೆ ಏನು ಎಂದು ಕಟ್ಟಾ ಸುಬ್ರಹ್ಮಣ್ಯನಾಯ್ಡು ಪ್ರಶ್ನಿಸಿದ್ದಾರೆ.
ಯತ್ನಾಳ್ ಸಂಪತ್ತಿನ ಮೂಲ ಕೆದಕಲು ವಿಜಯೇಂದ್ರ ಬಣ ಚಿಂತನೆ ನಡೆಸುತ್ತಿದೆ.
ಈ ಮಧ್ಯೆ, ಬಿಜೆಪಿ ಹಿರಿಯ ನಾಯಕ ಶ್ರೀರಾಮುಲು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ವರಿಷ್ಟರು ಅವಕಾಶ ನೀಡಿದರೆ ಪಕ್ಷ
ಮುನ್ನಡೆಸಲು ಸಿದ್ಧ. ನನ್ನ ನಾಯಕತ್ವದಲ್ಲಿ 150 ಸೀಟ್ ಗೆಲ್ಲುವ ವಿಶ್ವಾಸ ನನಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯಾಧ್ಯಕ್ಷ ಪದವಿಗೆ ದಿನಗಳೆದಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಯಾವ
ಹಂತ ತಲುಪಲಿದೆ ಎಂಬುದೇ ಸದ್ಯದ ಕುತೂಹಲ.