newsics.com
ಉಡುಪಿ: ವ್ಯಕ್ತಿಯೊಬ್ಬ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿರುವ ಘಟನೆ ಉಡುಪಿಯ ಗುಂಡ್ಮಿ ಗ್ರಾಮದಲ್ಲಿ ನಡೆದಿದೆ.
ಹೌದು, ಸೇಲ್ಸ್ ಮ್ಯಾನ್ ಸೋಗಿನಲ್ಲಿ ಮನೆಗೆ ಬಂದ ವ್ಯಕ್ತಿ ಮನೆಯವರನ್ನು ಕರೆದು ಕೆಲ ವಸ್ತುಗಳನ್ನು ಖರೀದಿಸುವಂತೆ ಹೇಳಿದ್ದಾನೆ. ಈ ವೇಳೆ ಮನೆಯ ಮಹಿಳೆ ವಸ್ತುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು, ತಮಗೆ ಬೇಡ ಎಂದು ಹೇಳಿ ಬಾಗಿಲು ಹಾಕಿದ್ದಾಳೆ. ಮಹಿಳೆ ಬಾಗಿಲು ಹಾಕಿ ಹೋಗುತ್ತಿದ್ದಂತೆ ದುರುಳ ಮನೆ ಬಳಿ ಇದ್ದ ಎರಡು ವರ್ಷದ ಕರುವಿನ ಬಾಲವನ್ನು ಕತ್ತರಿಸಿ ವಿಕೃತಿ ಮೆರೆದು ಪರಾರಿಯಾಗಿದ್ದಾನೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.