newsics.com
ಪ್ರಯಾಗ್ರಾಜ್(ಉತ್ತರ ಪ್ರದೇಶ): ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಜನಪ್ರಿಯವಾಗಿರುವ ಮೊನಾಲಿಸಾಳನ್ನು ನೋಡಲು, ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಈಗ ಕುಂಭಮೇಳದ ತುಂಬಾ ಮೊನಾಲಿಸಾಳದ್ದೇ ಮಾತು.
ಇದು ಮಾತು, ಸೆಲ್ಫೀ, ರೀಲ್ಸ್ಗಷ್ಟೇ ಮುಗಿದಿಲ್ಲ. ವ್ಯಕ್ತಿಯೊಬ್ಬ ಆಕೆಯ ಟೆಂಟ್ಗೆ ನುಗ್ಗಿ ಆಕೆಯ ಸಹೋದರನನ್ನು ಥಳಿಸಿರುವ ಘಟನೆ ವರದಿಯಾಗಿದೆ
. ಬಲವಂತವಾಗಿ ಟೆಂಟ್ಗೆ ನುಗ್ಗಿ ಫೋಟೊ ತೆಗೆದುಕೊಳ್ಳಲು ವ್ಯಕ್ತಿ ಪ್ರಯತ್ನಿಸಿದಾಗ ಆಕೆಯ ಸಹೋದರ ಅದನ್ನು ತಡೆದು ಫೋಟೊವನ್ನು ಮೊಬೈಲ್ನಿಂದ ಅಳಿಸುವಂತೆ ಕೇಳಿಕೊಂಡಿದ್ದಾರೆ. ಈ ಕಾರಣದಿಂದ ಆತನಿಗೆ ಥಳಿಸಿದ್ದಾರೆ. ಈಕೆ ತನ್ನ ಸಹಜ ಸೌಂದರ್ಯದಿಂದ ಪ್ರಖ್ಯಾತಿ ಪಡೆದಾಗಿನಿಂದಲೂ ಅಭಿಮಾನಿಗಳು ಫೋಟೋಗಳಿಗಾಗಿ ಆಕೆಯ ಬೆನ್ನತ್ತಿದ್ದಾರೆ.
ನನಗೆ ಭಯವಾಗಿದೆ. ಇಲ್ಲಿ ಯಾರೂ ಇಲ್ಲ, ಯಾರಾದರೂ ಹಾನಿ ಮಾಡಬಹುದು ಎನಿಸುತ್ತಿದೆ. ಕರೆಂಟ್ ಇಲ್ಲ, ಆದರೂ ಜನರು ಬಲವಂತವಾಗಿ ಟೆಂಟ್ ಪ್ರವೇಶಿಸುತ್ತಿದ್ದಾರೆ ಎಂದು ಮೊನಾಲಿಸಾ ಅಳಲು ತೋಡಿಕೊಂಡಿದ್ದಾರೆ.
ಮಹಾ ಕುಂಭಮೇಳದಲ್ಲಿ ವ್ಯಕ್ತಿಯೊಬ್ಬರು ಆಕೆಯನ್ನು ವೀಡಿಯೊದಲ್ಲಿ ಸೆರೆಹಿಡಿದು ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ಮೊನಾಲಿಸಾ ತನ್ನ ಅದ್ಭುತ ಸಹಜ ಸೌಂದರ್ಯದಿಂದ ಮನೆಮಾತಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾಳೊಂದಿಗೆ ರೀಲ್ಸ್ ಮಾಡುವುದು, ಸಂದರ್ಶನ ನಡೆಸುವವರು, ಫೋಟೊ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ಮೊನಾಲಿಸಾಳ ತಂದೆ ಪ್ರಕಾರ, ಆಕೆಯನ್ನು ಮನೆಗೆ ಕಳುಹಿಸಲಾಗಿದೆ ಎಂಬ ವರದಿಗಳು ಹೊರಬಿದ್ದಿದ್ದವು. ಆದರೆ ಆಕೆಯ ಅಜ್ಜ ಅದನ್ನು ನಿರಾಕರಿಸಿದ್ದಾರೆ. ಆಕೆ ಕುಂಭಮೇಳದಲ್ಲಿಯೇ ಇದ್ದಾಳೆ ಎಂದು ಹೇಳಿದ್ದಾರೆ. ಜನರು ಆಕೆಯ ಹಿಂದೆ ಮುಂದೆ ಸುತ್ತುತ್ತಿರುವ ಕಾರಣ ಆಕೆಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆಕೆ ತಂದಿರುವ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ಅಜ್ಜ ಹೇಳಿದ್ದಾರೆ.
ಒಂದೇ ಕಾಲಲ್ಲಿ ಕುಂಟುತ್ತ ವೇದಿಕೆಗೆ ಬಂದ ರಶ್ಮಿಕಾ! Viral Video ನೋಡಿ
Metro: ಮೆಟ್ರೋದಲ್ಲಿ 40 ಲಕ್ಷ ಕ್ಯಾಶ್, 89 ಲ್ಯಾಪ್ಟಾಪ್, 193 ಮೊಬೈಲ್ ಪತ್ತೆ
ದೇಹ ತ್ಯಾಗ ಮಾಡಿದನರಸಿಂಹೇಶ್ವರ ಆಶ್ರಮದ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು