newsics.com
ತಿರುಪತಿ: ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಆರು ಮಂದಿ ಭಕ್ತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಧನ ನೀಡುವುದಾಗಿ ಆಂಧ್ರಪ್ರದೇಶ ಮುಜರಾಯಿ ಇಲಾಖೆ ಸಚಿವ ಅಂಗನಿ ಸತ್ಯ ಪ್ರಸಾದ್ ಹೇಳಿದ್ದಾರೆ.
ಬುಧವಾರ ರಾತ್ರಿ ಕಾಲ್ತುಳಿತದಲ್ಲಿ ಮೃತಪಟ್ಟವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
40 ಮಂದಿ ಗಾಯಾಳುಗಳಲ್ಲಿ 32 ಗಾಯಾಳುಗಳು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.
ವೈಕುಂಠ ಏಕಾದಶಿ ಅಂಗವಾಗಿ ಕರ್ನಾಟಕದಿಂದಲೂ ಸಾವಿರಾರು ಭಕ್ತರು ತಿರುಪತಿಗೆ ತೆರಳಿದ್ದರು. ಆದ್ರೆ ಗಾಯಗೊಂಡವರ ಪೈಕಿಯಾಗಲಿ ಅಥವಾ ಮೃತರ ಪೈಕಿ ಕರ್ನಾಟಕದವರು ಯಾರೂ ಇಲ್ಲ ಅನ್ನೋದು ದೃಢಪಟ್ಟಿದೆ.
6 ಮಂದಿ ತಿಮ್ಮಪ್ಪನ ಭಕ್ತರ ಸಾವಿನಿಂದ ವೆಂಕಟೇಶ್ವರನ ಸನ್ನಿಧಿಯಲ್ಲಿ ಸೂತಕದ ಛಾಯೆ ಆವರಿಸಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳುಗಳ ನರಳಾಟ ಹೇಳತೀರದಾಗಿದೆ. ವೈಕುಂಠ ಏಕಾದಶಿ ಅಂಗವಾಗಿ ಕರ್ನಾಟಕದಿಂದಲೂ ಸಾವಿರಾರು ಭಕ್ತರು ತಿರುಪತಿಗೆ ತೆರಳಿದ್ದರು. ಆದ್ರೆ ಗಾಯಗೊಂಡವರ ಪೈಕಿಯಾಗಲಿ ಅಥವಾ ಮೃತರ ಪೈಕಿ ಕರ್ನಾಟಕದವರು ಯಾರೂ ಇಲ್ಲ ಅನ್ನೋದು ದೃಢಪಟ್ಟಿದೆ.