newsics.com
ಬೆಂಗಳೂರು : ಸಿಂಹ, ಹುಲಿ ಮತ್ತು ಆನೆಗಳ ನೆಲೆಯಾದ ಉತ್ತರ ಜಿಂಬಾಬ್ವೆಯ ಮಳೆಕಾಡುಗಳಲ್ಲಿ ಕಳೆದು ಹೋಗಿದ್ದ 8 ವರ್ಷದ ಬಾಲಕ, 5 ದಿನಗಳ ಬಳಿಕ ಅಚ್ಚರಿ ರೀತಿಯಲ್ಲಿ ಪತ್ತೆಯಾಗಿದ್ದಾನೆ.
ಪವಾಡ ಸದೃಶವಾಗಿ ಬದುಕುಳಿದು ಬಂದಿರುವ ಬಾಲಕನನ್ನು ನೋಡಲು ಸುತ್ತಲಿನ ಜನರೆಲ್ಲರೂ ಆಗಮಿಸಿ, ಆತನ ಬಾಯಿಯಿಂದ ಅರಣ್ಯದಲ್ಲಿ ಕಳೆದ ದಿನಗಳ ಬಗ್ಗೆ ಕೇಳಿ ಆಶ್ವರ್ಯ ವ್ಯಕ್ತಪಡಿಸುತ್ತಿದ್ದರೆ.
ಎಂಟು ವರ್ಷದ ಬಾಲಕ ಅರಣ್ಯದಲ್ಲಿ ಸಿಕ್ಕ ಹಣ್ಣುಗಳನ್ನು ತಿಂದು, ಹೊಳೆಯಲ್ಲಿ ಹರಿಯುತ್ತಿರುವ ನೀರು ಕುಡಿದು ಬದುಕಿ ಬಂದಿದ್ದಾನೆ.
ಟಿನೋಟೆಂಡ ಪುದು ಅರಣ್ಯದಿಂದ ಜೀವಂತವಾಗಿ ಬಂದಿರೋದು ಒಂದು ರೀತಿಯ ಪವಾಡ ಎಂದು ಸ್ಥಳೀಯ ಸಂಸದ ಪಿ. ಮುತ್ಸಾ ಮುರೊಂಬೆಡ್ಜಿ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.
ಮಗು ಮನೆಗೆ ಹೋಗುವ ಶಬ್ದ ಕೇಳುವಂತೆ ಪ್ರತಿ ರಾತ್ರಿ ಡ್ರಮ್ ಬಾರಿಸಿದ ರಕ್ಷಣಾ ಕಾರ್ಯಕರ್ತರು. ಬಾಲಕ ಕಾಡಿನಲ್ಲಿ ದಾರಿ ತಪ್ಪಿ ಐದು ದಿನಗಳ ಕಾಲ ಅಲೆದಾಡಿ ಕಾಡಿನ ನದಿ ತೀರದಲ್ಲಿ ಸುಸ್ತಾಗಿ ಬಿದ್ದಿದ್ದಾನೆ ಎಂದು ಮುರೊಂಬೆಡ್ಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.