newsics.com
ಚಾಮರಾಜನಗರ: ಸಾರಿಗೆ ಬಸ್ಗಳಲ್ಲಿ ಮಹಿಳೆಯರ ಮಾದರಿಯಲ್ಲಿ ಪುರುಷರಿಗೆ ಉಚಿತ ನೀಡಿದರೆ ನಿಗಮ ಮುಚ್ಚಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು, ತಮ್ಮ ಭಾಷಣದಲ್ಲಿ, ಮಹಿಳೆಯರಿಗೆ ಉಚಿತ ಬಸ್ ನೀಡಿದ್ದೇವೆ ಎನ್ನುತ್ತಿದ್ದಂತೆ, ವ್ಯಕ್ತಿಯೊಬ್ಬ ನಮಗೂ ಉಚಿತ ಕೊಡಿ ಎಂದಾಗ ಎಚ್ಚೆತ್ತ ಸಿದ್ದರಾಮಯ್ಯ, ನಾನು ಹೇಳಿದಂತೆ ಉಚಿತ ಕೊಟ್ಟರೆ ಕೆಎಸ್ಆರ್ಟಿಸಿಯನ್ನೆ ಮುಚ್ಚಬೇಕಾಗುತ್ತದೆ ಎಂದು ಹಾಸ್ಯಭರಿತವಾಗಿ ಹೇಳುವ ಮೂಲಕ ಈಗಾಗಲೇ ನಿಗಮ ನಷ್ಟದಲ್ಲಿದೆ ಎಂಬುದನ್ನು ಬಹಿರಂಗವಾಗಿಯೇ ಸಿಎಂ ಒಪ್ಪಿಕೊಂಡರು.