newsics.com
ಬೆಳಗಾವಿ : ಗಂಡ ತನ್ನ ಮೇಲೆ ಸಂಶಯ ಪಡುತ್ತಾನೆ ಎಂದು ಬೇಸತ್ತು ಮನನೊಂದ ತಾಯಿಯೊಬ್ಬಳು ಮಗುವಿನ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಉಗಾರ ಖುರ್ದ್ ದಲ್ಲಿ ನಡೆದಿದೆ.
ಸಾತ್ವಿಕ್ ಕೊಲೆಯಾದ ಮಗು ಎಂದು ತಿಳಿದು ಬಂದಿದೆ. ಹತ್ಯೆಗೈದ ತಾಯಿಯನ್ನು ಭಾಗ್ಯಶ್ರೀ. ಕಳೆದ 7 ವರ್ಷಗಳ ಹಿಂದೆ ರಾಹುಲ್ ಕಟಗೇರಿ ಎಂಬಾತನೊಂದಿಗೆ ಮದುವೆಯಾಗಿದ್ದ ಭಾಗ್ಯಶ್ರಿ. ಮದುವೆಯಾದ ನಂತರವೂ ಸುಖವಾಗಿಲ್ಲ. ಗಂಡನೊಂದಿಗೆ ದಿನನಿತ್ಯ ಜಗಳ. ಜಗಳಕ್ಕೆ ಬೇಸತ್ತು ತವರುಮನೆಗೆ ಹೋಗಿದ್ದಳು. ಬಳಿಕ ಪತಿ ಹೆಂಡತಿಯ ತವರು ಮನೆ ಹಿರಿಯರೊಂದಿಗೆ ಮಾತಾಡಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ಇಂದು ಮತ್ತೆ ಗಲಾಟೆ ಶುರುವಾಗಿದ್ದು ಜಗಳ ವಿಕೋಪಕ್ಕೆ ತಿರುಗಿ ಕೋಪದಲ್ಲಿ ತಾಯಿ ಮಗುವಿನ ಕತ್ತು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸದ್ಯ ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.